ಧರ್ಮಾ ಜಲಾಶಯಕ್ಕೆ ಬಾಗೀನ

  • In State
  • August 6, 2021
  • 523 Views
ಧರ್ಮಾ ಜಲಾಶಯಕ್ಕೆ ಬಾಗೀನ

ಹಾನಗಲ್ : ಮಳಗಿ ಸಮೀಪದ ಧರ್ಮಾ ಜಲಾಶಯಕ್ಕೆ ಗುರುವಾರ ವಿಧಾನ ಪರಿಷತ್ ಶಾಸಕ ಶ್ರೀನಿವಾಸ ಮಾನೆ ಬಾಗೀನ ಅರ್ಪಿಸಿ ರೈತರ ಸಂಕಷ್ಟ ದೂರವಾಗಲೀ, ಬಾಳಿಗೆ ಬೆಳಕು ಬಾರಲಿ ಎಂದು ಗಂಗಾ ದೇವಿಗೆ ಪ್ರಾರ್ಥಿಸಿದರು. ಆನಂತರ ಮಾತನಾಡಿದರು. ಧರ್ಮಾ ಕಾಲುವೆಯ ಲೈನಿಂಗ್ ಸರಿಪಡಿಸಿ, ಜಲಾಶಯದ ಹೂಳು ತೆಗೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ನೀರು ಸಲೀಸಾಗಿ ಹರಿದುಹೋಗುವಂತ ಯೋಜನೆಯನ್ನು ಮಾಡುವ ಮೂಲಕ ಅನಾಹುತಗಳನ್ನು ತಪ್ಪಿಸುವಂತಾಗಬೇಕಿದೆ ಎಂದರು. “ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮೀಪದಿಂದ ಕಂಡಿದು, ಅಭಿವೃದ್ಧಿ ಚಿಂತಕರು ಬದಲಾವಣೆ ತರಬಲ್ಲರು ಎಂಬ ವಿಶ್ವಾಸವಿದೆ. ಪಕ್ಷದವರು ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಟ್ಟರೆ ಮಾತ್ರ ಸಾಧ್ಯವಿದೆ” ಎಂದರು.
ಶ್ರೀನಿವಾಸ ಮಾನೆ ಧರ್ಮಪತ್ನಿ ಉಷಾ ಮಾನೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಆರ್.ಎಸ್.ಪಾಟೀಲ, ಪುಟ್ಟಪ್ಪ ನರೇಗಲ್, ಪುರಸಭೆ ಅಧ್ಯಕ್ಷ ಖುರ್ಷಿದಅಹ್ಮದ್ ಹುಲ್ಲತ್ತಿ, ಉಪಾಧ್ಯಕ್ಷ ಮಹೇಶ್ ಪವಾಡಿ, ಕಾಂಗ್ರೇಸ್ ಮುಖಂಡರಾದ ಫಾರುಖಅಹ್ಮದ್ ಲೋಹಾರ, ಟಾಕನಗೌಡ ಪಾಟೀಲ, ಆರೀಫ ಲೋಹಾರ, ಮಹದೇವಪ್ಪ ಭಾಗಸರ, ಯಾಶೀರ ಅರಾಫತ್ ಮಕಾನದಾರ, ಚಂದ್ರಪ್ಪ ಜಾಲಗಾರ, ಯಾಸೀರಖಾನ ಪಠಾಣ, ರಾಮೂ ಯಳ್ಳೂರ, ಆದರ್ಶ ಶೆಟ್ಟಿ, ರವಿ ದೇಶಪಾಂಡೆ, ಬಸವರಾಜ ಹಾದಿಮನಿ, ಶಿವು ತಳವಾರ, ಶಿವು ಭದ್ರಾವತಿ, ಮಿಯ್ಯಾಜಾನ ಕಂಬಳಿ, ಕಲವೀರಪ್ಪ ಪವಾಡಿ, ಭರ್ಮಣ್ಣ ಶಿವೂರ, ಅನಿತಾ ಶಿವೂರ, ಶಿವಬಸಪ್ಪ ಪೂಜಾರ, ಗೀತಾ ಪೂಜಾರ, ವಿರೇಶ ಬೈಲವಾಳ ಇನ್ನಿತರರಿದ್ದರು.

Related