ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಮೇಲೆ ಹಲ್ಲೆ

ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಮೇಲೆ ಹಲ್ಲೆ

ಬೈಲಹೊಂಗಲ: ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿಯವರ ಮೇಲೆ ದುಷ್ಕರ್ಮಿಯೋರ್ವನು ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿ ಗಂಭೀರ ಗಾಯಗೊಳಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಆರೋಪಿಯನ್ನು ಹೊಸೂರ ಗ್ರಾಮದ ಮಲ್ಲಿಕಾರ್ಜುನ ಮಹಾದೇವಪ್ಪ ಬುಡಶಟ್ಟಿ ಎಂದು ಗುರುತಿಸಲಾಗಿದೆ.

ಮಲ್ಲಿಕಾರ್ಜುನ ಇತನು ರಾತ್ರಿ ಶ್ರೀಮಠಕ್ಕೆ ಆಗಮಿಸಿ ಕಳ್ಳತನಕ್ಕೆ ಯತ್ನಿಸಿದ್ದನು. ಇದನ್ನು ಕಂಡ ಶ್ರೀಗಳು ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಯು ತನ್ನ ಕೈಯಲ್ಲಿರುವ ಕಬ್ಬು ಕಟಾವು ಮಾಡುವ ಕೊಯಿತಾದಿಂದ ಶ್ರೀಗಳ ತಲೆಗೆ,ಕೈಗೆ, ಹೊಟ್ಟೆ ಭಾಗದಲ್ಲಿ ಕೊಚ್ಚಿದ ಪರಿಣಾಮ ರಕ್ತಸ್ರಾವಗೊಂಡರು. ಇದನ್ನು ಕಂಡು ಮಠದಲ್ಲಿದ್ದ ಭಕ್ತರೊಬ್ಬ ಬಿಡಿಸಿಲಿಕ್ಕೆ ಹೋದಾಗ ಆತನ ಮೇಲೆ ಸಹ ಹಲ್ಲೆಗೆ ಯತ್ನಿಸಿದ್ದಾನೆ. ತಕ್ಷಣ ಶ್ರೀಗಳನ್ನು ಚಿಕಿತ್ಸೆಗಾಗಿ ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ,ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಬೆಳಗಾವಿಯ ಉಪಪೆÇಲೀಸ್ ಅಧಿಕ್ಷಕ ಅಮರನಾಥ ರೆಡ್ಡಿ, ಸಿಪಿಐ ಮಂಜುನಾಥ ನಡುವಿನಹಳ್ಳಿ ನೀಡಿ ಪರಿಶೀಲಿಸಿದರು. ಆರೋಪಿಯನ್ನು ಬಂಧಿಸಿದ್ದು ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related