ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ

  • In State
  • May 3, 2022
  • 231 Views

ಶ್ರೀ ಹೋಮದೇವ ಕೆ.ಎಸ್. ಎಲ್. ಯು.  ಡೆವಲಪರ್ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ರಾಜಪ್ಪ ಇವರುಗಳು ನೇತೃತ್ವದಲ್ಲಿ ಶ್ರೀ ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀ ಈಶ್ವರ ಪ್ರಸಾದ್, ಶ್ರೀಕಾಂತ, ಸಿ.ಶಿವಣ್ಣ,ಸಿ.ಡಿ.ಹರೀಶ್, ಎಂ.ಎನ್.ಆರ್ ಸಿ.ಆರ್.ದತ್ತಾತ್ರೇಯ, ನಂಜುಂಡಯ್ಯ,ಎಲ್.ರಮೇಶ್, ಗೋವಿಂದ, ಹರಿರಾವ್, ಹಾಗೂ ಪತ್ರಿಕಾ ಮಿತ್ರರು ಹಾಜರಿದ್ದರು.

ಪಿ.ರಾಜಪ್ಪರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪತ್ರಿಕಾ ವಿತರಕರು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡೆ ಮಾಡಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಸರ್ಕಾರದ ಫಲಾನುಭವಿ ಕಾರ್ಡುಗಳನ್ನು ಪಡೆದುಕೊಳ್ಳಬೇಕು .ಸರ್ಕಾರದ ಯೋಜನೆಯಲ್ಲಿರುವ ಸೌಲತ್ತುಗಳನ್ನು ತಾವುಗಳೆಲ್ಲರೂ ಪಡೆದುಕೊಳ್ಳಬೇಕು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನಿಮ್ಮ ಮಕ್ಕಳ ಮದುವೆಗೆ ಹಾಗೂ 60 ವರ್ಷ ಆದ ನಂತರ ಪಿಂಚಣಿ ಯನ್ನು ನೀಡುತ್ತಿದ್ದು. ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಬ್ಯಾಂಕಿನಿಂದ ಇನ್ಕಮ್ ಪ್ರೂಫ್ ಇಲ್ಲದೆ 10 ಲಕ್ಷದವರೆಗೂ ಹಣ ಸಹಾಯ . ನಿಮ್ಮಂತ ಅಸಂಘಟಿತ ಕಾರ್ಮಿಕರಿಗೆ ವು lಇನ್ನೂ ಹಲವಾರು ರಾಜ್ಯ ಸರ್ಕಾರದ ಯೋಜನೆಗಳು ಜಾರಿಯಲ್ಲಿದ್ದು ಈ ಎಲ್ಲಾ ಯೋಜನೆಗಳನ್ನು ತಾವುಗಳು ಪಡೆದುಕೊಳ್ಳಲು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ ಎಂದು ಪಿ ರಾಜಪ್ಪ ರವರು ನುಡಿದರು.

Related