ಬೆಂಗಳೂರು ಗ್ರಾ. ಜಿಲ್ಲೆ ಸಿಇಓ ಎಂ.ಆರ್. ರವಿಕುಮಾರ್ ಭೇಟಿ

ಬೆಂಗಳೂರು ಗ್ರಾ. ಜಿಲ್ಲೆ ಸಿಇಓ ಎಂ.ಆರ್. ರವಿಕುಮಾರ್ ಭೇಟಿ

ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಿಇಓ ಎಂ.ಆರ್. ರವಿಕುಮಾರ್ ಇಂದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಮಕ್ಕೆ ಭೇಟಿ ನೀಡಿ, ಸುಮಾರು 10 ವರ್ಷದಿಂದ ವಿವಾದಕ್ಕೆ ಒಳಗಾಗಿದ್ದ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ. ಇನ್ನೂ ಈ ವೇಳೆ ದೊಡ್ಡಬೆಲೆ ಗ್ರಾಮದ ವೆಂಕಟರಾಯಪ್ಪ ಮತ್ತು ಮಾಜಿ ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ ಮಧ್ಯೆ ಜಾಗದ ವಿಚಾರಕ್ಕೆ ಶೀತಲ ಸಮರ ಏರ್ಪಟ್ಟಿದೆ.

ಕಳೆದ 10 ವರ್ಷದಿಂದ ಸಮರ ಏರ್ಪಟ್ಟಿತು, ಭೇಟಿ ವೇಳೆ ಗಲಾಟೆ ಮಾಡಿದ್ದಕ್ಕೆ ರವಿಕುಮಾರ್ ಗರಂ ಆಗಿ, ವೆಂಕಟರಾಯಪ್ಪಗೆ ಕ್ಲಾಸ್ ತೆಗೆದುಕೊಂಡು, ಈ ಜಾಗ ಸರ್ಕಾರಕ್ಕೆ ಸೇರಿದ್ದು ಎಂದು ಸ್ಥಳದಲ್ಲೆ ಅಳತೆ ಮಾಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ವೇಳೆ ನೆಲಮಂಗಲ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಸಿಇಓಗೆ ಸಾಥ್ ನೀಡಿದ್ದಾರೆ. ಇನ್ನೂ ದೊಡ್ಡಬೆಲೆ ಗ್ರಾ.ಪಂ. ಕಟ್ಟಡ ಅಂತಾ ನಾಳೆ ಉದ್ಘಾಟನೆಯಾಗಲಿದೆ.

 

Related