ಬೈಲಹೊಂಗಲ ಕಫ್ರ್ಯೂ: ಉತ್ತಮ ಪ್ರತಿಕ್ರಿಯೆ

ಬೈಲಹೊಂಗಲ ಕಫ್ರ್ಯೂ: ಉತ್ತಮ ಪ್ರತಿಕ್ರಿಯೆ

ಬೈಲಹೊಂಗಲ: ಕೊರೋನಾ ಹಿನ್ನೆಲೆ  ಕಫ್ರ್ಯೂ ಘೋಷಿಸಿದ  ಪರಿಣಾಮ ಬೈಲಹೊಂಗಲ ಪಟ್ಟಣ, ತಾಲೂಕಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ರವಿವಾರ ಕಫ್ರ್ಯೂ ಹಿನ್ನೆಲೆಯಲ್ಲಿ ಹಾಲು, ಔಷಧ ಅಂಗಡಿ, ಪೆಟ್ರೋಲ್ ಬಂಕ್ ಹೊರತಾಗಿ ಎಲ್ಲ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದ್ದವು. ವ್ಯಾಪಾರಸ್ಥರು ಅಂಗಡಿ ಬಂದ್  ಮಾಡಿದ್ದರು. ಬಸ್ ಸಂಚಾರ, ಖಾಸಗಿ, ಅಟೋ ಸ್ಥಗಿತಗೊಂಡಿದ್ದವು. ರಸ್ತೆಗಳು ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು. ಸಂಜೆ ಹೊತ್ತಿಗೆ ಜನರ ಓಡಾಟವಿತ್ತಾದರೂ ಜನರು ಬೇಜವಾಬ್ದಾರಿಯಿಂದ ವರ್ತಿಸಿದ್ದು ಕಂಡಿತು.

ಕೊರೋನಾ ಸುಳ್ಳು ಸುದ್ದಿ
ಬೈಲಹೊಂಗಲ ಪಟ್ಟಣದಲ್ಲಿ ಹೊರ ರಾಜ್ಯದಿಂದ ಬಂದವರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿ ಜನತೆಯಲ್ಲಿ ಆತಂಕ ಸೃಷ್ಠಿಯಾಗಿದ್ದು, ಇದಕ್ಕೆ ಕಿವಿಗೊಡಬೇಡಿ. ಕೇವಲ ಸಂಪಗಾಂವ ಗ್ರಾಮದ ಅಜ್ಮೀರದಿಂದ ಬಂದ ಇಬ್ಬರಿಗೆ ಮಾತ್ರ ಸೋಂಕು ದೃಢಪಟ್ಟಿದ್ದು, ಅವರನ್ನು ನೇರವಾಗಿ ಕ್ವಾರಂಟೈನ್ ಒಳಪಡಿಸಿದ್ದು, ಯಾರು ಭಯಪಡುವ ಅಗತ್ಯವಿಲ್ಲ ಎಂದು ಎಸಿ ಶಿವಾನಂದ ಭಜಂತ್ರಿ ತಿಳಿಸಿದರು.

Related