ದಾಳಿ ಮಾಡಿದ ಒಂಟಿ ಸಲಗ

ದಾಳಿ ಮಾಡಿದ ಒಂಟಿ ಸಲಗ

ತುಮಕೂರು,ಮಾ. 9 : ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿರುವ ಘಟನೆ ಹಿರೇಹಳ್ಳಿ ಸಮೀಪದ ಕೋಳಿಹಳ್ಳಿಯಲ್ಲಿ ನಡೆದಿದೆ. ಕೇಶವಮೂರ್ತಿ(60) ಆನೆದಾಳಿಗೆ ಒಳಗಾದ ವ್ಯಕ್ತಿ. ಇಂದು ಬೆಳಗ್ಗೆ ಮನೆಯ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ನುಗ್ಗಿದ ಕಾಡಾನೆ ದಂತದಿಂದ ತಿವಿದಿದು ಮೇಲೆತ್ತಿ ಎಸೆದಿದೆ.
ಎರಡೂ ಕಾಲುಗಳು ಮುರಿದಿದ್ದು, ಕೂಡಲೇ ಗ್ರಾಮಸ್ಥರು ಗದ್ದಲ ಎಬ್ಬಿಸಿ ಆನೆಯನ್ನು ಓಡಿಸಿ, ಕೂಡಲೇ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿ, ಬುಕ್ಕಾಪಟ್ಟಣ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಒಂಟಿ ಸಲಗವನ್ನು ನೆಲಮಂಗಲದ ಕಡೆ ಓಡಿಸಲಾಗಿತ್ತು.

Related