ಮೈಸೂರು : ಸ್ವಪಕ್ಷದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವಪಕ್ಷದ ಒಳಸಂಚಿನಿಂದ ನಾನು ಸೋಲಬೇಕಾಯಿತು. ಆದರೆ, ಬಾದಾಮಿ ಜನ ನನ್ನ ಕೈ ಹಿಡಿದರು ಒಂದು ವೇಳೆ ಅಲ್ಲೂ ಕೂಡ ಸೋತಿದ್ದಿದರೆ ನನ್ನ ರಾಜಕೀಯ ಭವಿಷ್ಯ ಏನಾಗುತ್ತಿತ್ತಿ ಎಂದು ಹೇಳಿದ್ದರು.
ಹೇಳಿಕೆ ಸಂಬAಧ ಪ್ರತಿಕ್ರಿಯೆ ನೀಡಿರುವ ಎ.ಹೆಚ್ ವಿಶ್ವನಾಥ್ ಅವರು, ಸಿದ್ದರಾಮಯ್ಯ ಅವರು ನನ್ನನ್ನು ಸೇರಿ ಕಾಂಗ್ರೆಸ್ ನಲ್ಲಿದ್ದ ಸಾಕಷ್ಟು ಜನರಿಗೆ ತಾವು ಮುಖ್ಯಮಂತ್ರಿಯಾಗುವ ಸಲುವಾಗಿ ಬೆನ್ನಿಗೆ ಚೂರಿ ಇರಿದಿದ್ದರು. ಇದೀಗ ಅವರಿಗೆ ಆ ನೋವು ಅರ್ಥವಾಗುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು, ಚುನಾವಣೆ ನಡೆದು ಎರಡು ವರ್ಷಗಳಾದ ಬಳಿಕ ಈ ವಿಚಾರದ ಕುರಿತು ಏಕೆ ಮಾತನಾಡಲಾಗುತ್ತಿದೆ ? ಇಂತಹ ಹೇಳಿಕೆಗಳು ಪಕ್ಷದ ಕಾರ್ಯಕರ್ತರಲ್ಲಿ ನಿರಾಶೆಗಳನ್ನು ಮೂಡಿಸುತ್ತದೆ ಎಂದು ಹೇಳಿದರು.