ಬೆಂಗಳೂರು: ದೊಮ್ಮಲೂರಿನ ಅಮರಜ್ಯೋತಿ ಲೇಔಟ್ನ ಮಾರುತಿ ಇನ್ಫೋಟೆಕ್ ಸೆಂಟರ್ನಲ್ಲಿ ಶುಕ್ರವಾರ ಹಿಟಾಚಿ ರೈಲ್ ಎಸ್ಟಿಎಸ್ ಸಂಸ್ಥೆಯ ನೂತನ ಕಚೇರಿಯ ಉದ್ಘಾಟನೆ ನಡೆದಿದೆ.
ಹಿಟಾಚಿ ಎಸ್ಟಿಎಸ್ನ ನೂತನ ಘಟಕದ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಉದ್ಘಾಟಿಸಿದರು. ಸಮಾರಂಭದಲ್ಲಿ ಹಿಟಾಚಿ ರೈಲ್ ಎಸ್ಟಿಎಸ್ ಸಂಸ್ಥೆಯ ಪೂರ್ಣಾವಧಿ ನಿರ್ದೇಶಕರು, ಮತ್ತು ರೈಲ್ ಕಂಟ್ರೋಲ್ ಮುಖ್ಯಸ್ಥರಾದ ಮನೋಜ್ ಕುಮಾರ್ ಎನ್, ಹಿಟಾಚಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್ ಕೌಶಲ್, ಹಿಟಾಚಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿನಿಚಿ ಸಕಾಯ್ ಅವರು ಉಪಸ್ಥಿತರಿದ್ದರು.