ಶೆಟರ್ ಮುರಿದು 3 ಲಕ್ಷ ನಗದು ಕಳುವು

  • In Crime
  • August 4, 2020
  • 648 Views
ಶೆಟರ್ ಮುರಿದು 3 ಲಕ್ಷ ನಗದು ಕಳುವು

ಗೌರಿಬಿದನೂರು: ಅಲಿಪುರದ ರಾಮು ಎಂಟರ್ ಪ್ರೈಸಸ್ ಅಂಗಡಿಯ ಶೆಟರ್ ಮುರಿದು ಸುಮಾರು 3 ಲಕ್ಷ ರೂ. ನಗದು ದೋಚಿದ್ದಾರೆ.

ಗ್ರಾಮದಲ್ಲಿನ ಬ್ಯಾಂಕ್ ಆಫ್ ಬರೋಡಗೆ ಸಂಬಂಧಿಸಿ ಕೆಲವು ಸೇವಾ ಕಾರ್ಯಗಳು ಹೊರಗುತ್ತಿಗೆ ಆಧಾರದ ಮೇಲೆ ನಡೆಯುತ್ತಿದ್ದವು. ಆದ್ದರಿಂದಲೇ ಅಂಗಡಿಯಲ್ಲಿ ಹೆಚ್ಚಿನ ಹಣದ ವಹಿವಾಟು ನಡೆಯುತ್ತಿತ್ತು. ಇದನ್ನು ಗಮನಿಸಿದ ಚೋರರು ಶನಿವಾರ ರಾತ್ರಿ ಅಂಗಡಿಯ ಶೆಟರ್ ಮುರಿದು ಗಲ್ಲಾಪೆಟ್ಟಿಗೆಯಲ್ಲಿದ್ದ ಸುಮಾರು 3 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಅಂಗಡಿಯ ಮಾಲಿಕ ರಾಮಚಂದ್ರಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಮಂಚೇನಹಳ್ಳಿ ಪಿಎಸೈ ಲಕ್ಷ್ಮಿನಾರಾಯಣ ಕೇಸು ದಾಖಲಿಸಿಕೊಂಡು ದುಷ್ಕರ್ಮಿಗಳ ಶೋಧಕ್ಕೆ ಮುಂದಾಗಿದ್ದಾರೆ.

Related