ಬೆಂಕಿ ತಗುಲಿ 1 ಲಕ್ಷ ನಗದು, 30ಗ್ರಾಂ ಚಿನ್ನ ಭಸ್ಮ

ಬೆಂಕಿ ತಗುಲಿ 1 ಲಕ್ಷ ನಗದು, 30ಗ್ರಾಂ ಚಿನ್ನ ಭಸ್ಮ

ಗುರಮಿಠಕಲ್ : ದೇವರ ಮುಂದಿನ ದೀಪ ಮನೆಯಲ್ಲಿನ ತಿಜೋರಿಗೆ ತಗುಲಿದ ಪರಿಣಾಮ ಒಂದು ಲಕ್ಷಕ್ಕೂ ಅಧಿಕ ಹಣ ಮತ್ತು 30ಗ್ರಾಂ ಚಿನ್ನ ಸೇರಿದಂತೆ ಮಹತ್ತರ ದಾಖಲೆಗಳು ಸಂಪೂರ್ಣ ಸುಟ್ಟ ಕರಕಲಾದ ಗುರುಮಠಕಲ್ ನಲ್ಲಿ ಘಟನೆ ನಡೆದಿದೆ.

ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿನ ಮಲ್ಲಯ್ಯ ಕಟ್ಟಾ ಓಣಿ ನಿವಾಸಿ ಯಲ್ಲಮ್ಮ ಎಂಬುವವರು ಮನೆಯಲ್ಲಿ ಈ ಅವಘಡ ನಡೆದಿದೆ. ಬೆಳಗ್ಗೆ ದೇವರ ಪೂಜೆ ಮುಗಿಸಿ, ಕುಟುಂಬದ ಸದಸ್ಯರು ತಮ್ಮ ಕೆಲಸಕ್ಕೆ ತೆರಳಿದ್ದರು. ಈ ವೇಳೆ ದೇವರ ಮುಂದಿದ್ದ ದೀಪ ಗಾಳಿಗೆ ತಿಜೋರಿಗೆ ತಾಕೀದೆ, ನಿಧಾನವಾಗಿ ಇಡೀ ತಿಜೋರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ತಿಜೋರಿಯಲ್ಲಿದ್ದ 30 ಗ್ರಾಂ ಚಿನ್ನ, 1 ಲಕ್ಷ ನಗದು ಹಣ, ಆಸ್ತಿ ದಾಖಲೆಗಳು ಸೇರಿದಂತೆ, ಮಕ್ಕಳ ಶಾಲೆ ದಾಖಲೆಗಳು ಸಹ ಬೆಂಕಿಗೆ ಆಹುತಿಯಾಗಿವೆ.

ಸಂಕಷ್ಟದಲ್ಲಿ ಆಸರೆಯಾಗಿ ಬೇಕಿದ್ದ ಎಲ್ಲಾ ದಾಖಲೆಗಳು ಮತ್ತು ಹಣ ಸುಟ್ಟಿದ್ದು, ಇದರಿಂದಾಗಿ ಯಲ್ಲಮ್ಮನ ಕುಟುಂಬ ಚಿಂತಾಕ್ರಾAತರಾಗಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Related