ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಹುಳಿಮಾವು ಗ್ರಾಮದ ಸುಪ್ರಸಿದ್ದ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಐತಿಹಾಸಿಕ ಬ್ರಹ್ಮ ರಥೋತ್ಸವದ ಅಂಗವಾಗಿ ಹುಳಿಮಾವಿನ ವಿಜಯಶ್ರೀ ಬಡಾವಣೆಯಲ್ಲಿ ಶ್ರೀರಾಮನವಮಿ ಆಚರಣೆ ಮಾಡಿದರು. ನಗರದ ಮುಖಂಡರಿಂದ ಪ್ರತಿ ವರ್ಷದಂತೆ ಈ ವರ್ಷವು ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಮಜ್ಜಗೆ, ಪಾನಕ, ಅನ್ನ ಸಂಪರ್ಪಣೆ ಮಾಡುವ ಮೂಲಕ ರಥೋತ್ಸವವನ್ನು ವಿಜೃಂಭನೆಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಅರಕೆರೆ ವಾರ್ಡ್ ನ ಬಿಜೆಪಿ ಅಧ್ಯಕ್ಷರು ಹಾಗೂ ಗೋಕುಲ್ ಗ್ರೂಪ್ಸ್ ಮಾಲೀಕರಾದ ಎಂ.ಮಂಜುನಾಥ್, ಬಿಜೆಪಿ ಮುಖಂಡ ಸತೀಶ್, ಪ್ರಶಾಂತ್, ಮೂರ್ತಿ, ಪವನ್ ಮತ್ತಿತರು ಉಪಸ್ಥಿತರಿದ್ದರು.