ಕೃಷ್ಣ ಸುಂದರಿ ತ್ರಿಷಾ ಮತ್ತೆ ಚಂದನವನಕ್ಕೆ

ಕೃಷ್ಣ ಸುಂದರಿ ತ್ರಿಷಾ ಮತ್ತೆ ಚಂದನವನಕ್ಕೆ

ದ್ವಿತ್ವ ಚಿತ್ರದಿಂದ ಮತ್ತೆ ಚಂದನವನಕ್ಕೆ ತ್ರಿಷಾ ಕೃ಼ಷ್ಣನ್ ಎಂಟ್ರಿ ಕೂಟ್ಟಿದ್ದಾರೆ. ಈ ಹಿಂದೆ ಪವರ್ ಚಿತ್ರದಲ್ಲಿ ಒಂದಾಗಿದ್ದ ಪುನೀತ್ ರಾಜ್ ಕುಮಾರ್ ಹಾಗು ತ್ರಿಷಾ ಜೊಡಿ ಈಗ ದ್ವಿತ್ವ ಚಿತ್ರದಲ್ಲಿ ಮತ್ತೆ ಒಂದಾಗಲಿದ್ದಾರೆ. ಲೂಸಿಯ ಹಾಗು ಯೂ ಟರ್ನ ಚಿತ್ರದ ನಿದೇರ್ಶಕ ಪವನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ದ್ವಿತ್ವ ಚಿತ್ರದ ನಾಯಕಿಯ ಆಯ್ಕೆ ಬಗ್ಗೆ ಚಿತ್ರರಂಗದಲ್ಲಿ ಸುದ್ದಿ ಹರಿದಾಡುತಿತ್ತು. ಇದೀಗ ಹೊಂಬಾಳೆ ಫಿಲಂ ಸಂಸ್ಥೆ ಟ್ವೀಟ್ ಹಂಚಿಕೂಳ್ಳುವುದರ ಮೂಲಕ ಉಹಾಪೊಹಗಳಿಗೆ ತೆರೆ ಎಳೆದಿದೆ. “ದ್ವಿತ್ವ ಚಿತ್ರದ ನಾಯಕಿ ತ್ರಿಷಾ ಕೃಷ್ಣನ್‌ಗೆ ಸುಸ್ವಾಗತ” ಎಂದು ಹೊಂಬಾಳೆ ಫಿಲಂ ಸಂಸ್ಥೆ ಆಗಸ್ಟ್ ೦೨ ರಂದು ಟ್ವಿಟರ್‌ನಲ್ಲಿ ಪ್ರಕಟಗೊಳಿಸಿತ್ತು. ಚಿತ್ರದಲ್ಲಿ ಪವರ್ ಸ್ಟಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ದ್ವಿತ್ವ ಚಿತ್ರದ ಪೊಸ್ಟರ್ ವಿವಾದಕ್ಕೆ ಒಳಗಾಗಿತ್ತು, ಪೊಸ್ಟರ್ ಡಿಸೈನ್ ನಕಲು ಎಂಬ ಟೀಕೆ ಕೇಳಿ ಬಂದಿತ್ತು, ಈ ಬಗ್ಗೆ ನಿರ್ದೇಶಕ ಪವನ್ ಸ್ಪಷ್ಟನೆ ಪಡಿಸಿದ್ದರು.

Related