ಜಮೀರ್ ರಾಜೀನಾಮೆ ನೀಡಲಿ : ಸುರೇಶ್ ಅಂಗಡಿ

ಜಮೀರ್ ರಾಜೀನಾಮೆ ನೀಡಲಿ : ಸುರೇಶ್ ಅಂಗಡಿ

ಬೆಳಗಾವಿ, ಏ. 20 : ಪಾದನಾರಾಯನಪುರ ಗಲಾಟೆ ದೇಶದ್ರೋಹಿ ಕೃತ್ಯ. ಇಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಲಿ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಹೇಳಿದರು.
ಪಾದನಾರಾಯಣಪುರದಲ್ಲಿ ನಿನ್ನೆ ವೈದ್ಯರು ಹಾಗೂ ಪೊಲೀಸರು ಕೊರೊನಾ ಪರೀಕ್ಷೆಗೆ ಹೋದ ವೇಳೆಯಲ್ಲಿ ಸ್ಥಳೀಯರು ಗಲಾಟೆ ನಡೆಸಿದ್ದರು. ಈ ಘಟನೆ ಬಗ್ಗೆ ಮಾತನಾಡಿ, ಕೊರೊನಾ ಯಾವುದೇ ಜಾತಿ, ಭಾಷೆ ನೋಡಿ ಬರುವುದಿಲ್ಲ. ಕೊರೊನಾ ವೈರಸ್ ಹೋರಾಡಲು ಪಿಎಂ ಮೋದಿ, ಸಿಎಂ ಯಡಿಯೂರಪ್ಪ ಜನತೆಗೆ ಕರೆಕೊಟ್ಟಿದ್ದಾರೆ. ಪ್ರತಿಯೊಬ್ಬರು ಸಹಕಾರ ನೀಡುವ ಕೆಲಸ ಮಾಡಬೇಕು. ಸಹಕಾರ ನೀಡುವ ಬದಲಾಗಿ ಗಲಾಟೆ ಮಾಡುವುದು ದೇಶದ್ರೋಹಿ ಕೃತ್ಯ.
ಕಾನೂನುಗಿಂತ ಶಾಸಕ ಜಮೀರ್ ಅಹಮ್ಮದ್ ಖಾನ್, ಸಿ.ಎಂ ಇಬ್ರಾಹಿಂ ಅವರು ದೊಡ್ಡವರಲ್ಲ. ಜಮೀರ್ ಅಹ್ಮದ್ ಈ ಘಟನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತ ಪರವಾಗಿ ಇದ್ದಾರೋ ಬೇರೆ ದೇಶ ಪರವಾಗಿ ಇದ್ದಾರೋ ಸ್ಪಷ್ಟಪಡಿಸಬೇಕು.

Related