ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಹುಬ್ಬಳ್ಳಿ: ಮದುವೆ ಬೇಡವೆಂದು ಯುವಕನ್ನೊಬ್ಬ ಕೆರೆಗೆ ಹಾರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ದೇವಾಂಗ ಪೇಟೆ ನಿವಾಸಿ (29)  ಶರಣಪ್ಪ ಫಕ್ಕೀರಪ್ಪ ಹಡಪದ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಲಾಕ್ ಡೌನ್ ನಿಂದಾಗಿ ಮದುವೆ ವಿಳಂಬ ಆಗಿದ್ದಕ್ಕೆ ಶರಣಪ್ಪನಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಲಾಕ್ ಡೌನ್ ವೇಳೆ ಸರಳ ಮದುವೆಗೆ ಮುಂದಾಗದ ಕುಟುಂಬ ಲಾಕ್ ಡೌನ್ ಮುಗಿದ ನಂತರ ಅದ್ಧೂರಿಯಾಗಿ ಮದುವೆ ಮಾಡಲು ನಿ‍ರ್ಧರಿಸಿದ್ದರು

ಆದರೆ ಪೋಷಕರು ಮದುವೆಯನ್ನು ಮುಂದಕ್ಕೆ ಹಾಕುತ್ತಿದ್ದರಿಂದ ಶರಣ್ಣಪ್ಪ ಜಗಳ ಮಾಡಿಕೊಂಡು ಮನೆ ಬಿಟ್ಟು ಹೊರಹೋಗಿದ್ದ. ಕೋಪ ಕಡಿಮೆಯಾದ ಮೇಲೆ ಮನೆಗೆ ಬರುತ್ತಾನೆ ಎಂದು ಪೋಷಕರು ಸುಮ್ಮನಿದ್ದರು. ಆದರೆ ಆತನ ಮೃತದೇಹ ಕರೆಯಲ್ಲಿ ಪತ್ತೆಯಾಗಿತ್ತು. ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Related