ಚಿಕ್ಕಮಗಳೂರು,ಮಾ.11 : ಏಷ್ಯಾದಲ್ಲಿಯೇ ಪ್ರಪ್ರಥಮ ಬಾರಿಗೆ ಸೆ.7 ರಿಂದ 9 ರವರೆಗೆ ಐದನೇ ವಿಶ್ವ ಕಾಫಿ ಸಮಾವೇಶ ಮತ್ತು ಎಕ್ಸ್ಪೋ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ. ಎಸ್. ಬೋಜೇಗೌಡ ತಿಳಿಸಿದರು. ಸಮಾವೇಶವು ಭಾರತದ ಕಾಫಿ ಉದ್ಯಮವನ್ನು ವಿಶ್ವಕ್ಕೆ ಪರಿಚಯಿಸಲು ಅತ್ಯುತ್ತಮವಾದ ಅವಕಾಶವಾಗಿದ್ದು, ಜೊತೆಗೆ ಈ ಸಮಾವೇಶವು ಕಾಫಿ ಉದ್ಯಮಗಳ ಸಹಭಾಗಿತ್ವದೊಂದಿಗೆ ಕಾಫಿ ತಂತ್ರಜ್ಞರು, ಕೈಗಾರಿಕೋದ್ಯಮಗಳ ಮುಖ್ಯಸ್ಥರು, ರಫ್ತುದಾರರು, ಪರಿಣಿತ ವ್ಯಕ್ತಿಗಳ ವೇದಿಕೆಯಾಗಲಿದೆ ಎಂದರು.
5ನೇ ವಿಶ್ವ ಕಾಫಿ ಸಮಾವೇಶಕ್ಕೆ ಎಲ್ಲಾ ಬೆಳೆಗಾರರು ಸಹಕರಿಸಬೇಕು. ದೇಶದ ನಾಯಕರು ಹಾಗೂ ರಾಜ್ಯಮಟ್ಟದ ನಾಯಕರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದು ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಆಯೋಜನೆಗೊಂಡಿದೆ ಕಾಫಿ ಉದ್ಯಮವನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಟಿಯಿಂದ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದು ಹೇಳೀದರು.