ಕಾಮಗಾರಿ ಪೂಜಾ ಕಾರ್ಯಕ್ರಮ

ಕಾಮಗಾರಿ ಪೂಜಾ ಕಾರ್ಯಕ್ರಮ

ಬೆಂಗಳೂರು : ನಗರದ ದಾಸರಹಳ್ಳಿಯಲ್ಲಿರು ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಏಪರ್ಡಿಸಲಾದ ಕಾಮಗಾರಿಯ ಪೂಜೆ ಕಾರ್ಯಕ್ರಮವನ್ನು ವಸತಿ ಸಚಿವ ವಿ.ಸೋಮಣ್ಣ ಗುರುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಈ ಕಾಮಗಾರಿಯನ್ನು ಸುಮಾರು 173 ಕೋ.ರೂ ವೆಚ್ಚದಲ್ಲಿ 5.5 ಕಿ.ಮೀ ಉದ್ದದ ಹೆಚ್.ಟಿ. ಲೈನ್‍ನ್ನು 7.5 ಕಿ.ಮೀ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ನಡೆಯಲ್ಲಿದೆ. ಮುಖ್ಯ ರಸ್ತೆಗಳಿಗೆ 7ರಿಂದ8 ಫೀಟ್ ಅಡಿ ಜಾಗವನ್ನು ಮಣ್ಣಿನಲ್ಲಿ ಭರ್ತಿ ಮಾಡಿ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳುತ್ತೇವೆ. ಬೆಂಗಳೂರಿನಲ್ಲಿ 66 ವಾರ್ಡ್ ಗಳನ್ನು ತೆಗೆಯಬೇಕು ಇನ್ನೂ ಈ ಕಾಮಗಾರಿಯನ್ನು 3-4 ತಿಂಗಳಿನಲ್ಲಿ ಮುಗಿಸಿಕೊಡುತ್ತೇನೆ. ಇದೋಂದು ವಿನುತನ ಕಾರ್ಯಕ್ರಮ ಎಂದು ಹೇಳಿದರು.

ಈ ವೇಳೆ ಎಂಪಿ, ಸೋಮಶೇಖರ್ ಇನ್ನಿತರರು ಉಪಸ್ಥಿತರಿದ್ದರು.

Related