ಲಂಚ ನೀಡಿದ್ರೆ ಕೆಲಸ ಮಾಡತ್ತೀನಿ : ಲೆಕ್ಕಾಧಿಕಾರಿ

ಲಂಚ ನೀಡಿದ್ರೆ ಕೆಲಸ ಮಾಡತ್ತೀನಿ : ಲೆಕ್ಕಾಧಿಕಾರಿ

ಕಲಬುರಗಿ : ಜಿಲ್ಲೆಯ ಯಡ್ರಾಮಿ ತಾಲೂಕಿನ ಆಲೂರು ಗ್ರಾ.ಪಂ ಗ್ರಾಮ ಲೆಕ್ಕಾಧಿಕಾರಿ ಗಣೇಶ ಜದ್ದರ್ ಲಂಚ ಪಡೆಯುವ ಆಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಾಂತೇಶ ಎಂಬುವರು ಯಡ್ರಾಮಿ ತಾಲೂಕಿನ ಮಾರಡಗಿ ಗ್ರಾಮದ ಸರ್ವೆ ನಂ. 131/1ರಲ್ಲಿನ ಮೂರು ಎಕರೆ ಜಮೀನು ಖರೀದಿ ಮಾಡಿದ್ದರು.

ಪಹಣಿಯಲ್ಲಿ ಹೆಸರು ನೊಂದಾವಣೆ ಮಾಡಲು ಗ್ರಾಮ ಲೆಕ್ಕಿಗ ಗಣೇಶ ಜದ್ದಾರ್ ಅವರ ಬಳಿ ಹೊದರೆ ಹಣ ಕೊಟ್ಟರೆ ನಿಮ್ಮ ಕೆಲಸ ಆಗುತ್ತೆ ಎಲ್ಲರೂ ಹಣ ಕೊಡ್ತಾರೆ ನೀವು ಹಣ ನೀಡಬೇಕು ನಾವು ಮೇಲಾಧಿಕಾರಿಗಳಿಗೆ ಕೊಡಬೇಕು ಎಂದು ಗೂಗಲ್ ಪೇ ಮುಖಾಂತರ 2000 ರೂ. ಹಣ ಸಂದಾಯ ಮಾಡಿಕೊಂಡಿದ್ದಾರೆ.

ಸರ್ಕಾರದ ಕೆಲಸ ದೇವರ ಕೆಲಸ ಅಂತಾರೆ ಆದರೆ ಇಂತಹ ಗ್ರಾಮ ಲೆಕ್ಕಾಧಿಕಾರಿಗಳಿದ್ದರೆ ಬಡವರ ಗೋಳು ಹೇಳತಿರದು. ಇನ್ನೂ ಹಣ ಪಿಕಿಸಿಕೊಂಡು ಪಹಣಿಯಲ್ಲಿ ಹೆಸರು ನೊಂದಾವಣೆ ಸಹ ಮಾಡಿಲ್ಲ. ಲಂಚದ ಬಗ್ಗೆ ಎಲ್ಲಾ ದಾಖಲೆಯನ್ನು ಮಹಾಂತೇಶ ಹೊಸಮನಿ ಅವರು ಮೇಲಾಧಿಕಾರಿಗಳಿಗೆ ಕೊಟ್ಟರು ಸಹ ಇವರ ಮೇಲೆ ಯಾವುದೇ ಕ್ರಮ ಇನ್ನೂ ತೆಗೆದುಕೊಂಡಿಲ್ಲವೆಂಬುವುದು ನಾಚಿಕೆಗೇಡಿನ ವಿಚಾರವಾಗಿದೆ.

ಗ್ರಾಮ ಲೆಕ್ಕಿಗ ಮಹಾಂತೇಶ ಹೊಸಮನಿ ಮನೆಗೆ ಹೋಗಿ ನೀವು ಲಂಚದ ಬಗ್ಗೆ ಮೇಲಾಧಿಕಾರಿಗಳಿಗೆ ನೀಡಿರುವ ಮನವಿ ಪತ್ರವನ್ನು ವಾಪಸ್ಸು ತಗೊಳ್ಳಿ ಎಂದು ಬೆದರಿಕೆ ಹಾಕಿದ್ದಾನೆ ಎಂದು ಮಹಾಂತೇಶ ಆರೋಪಿಸಿದ್ದಾರೆ.

ಇನ್ನಾದರೂ ಇಂತಹ ಗ್ರಾಮ ಲೆಕ್ಕಾಧಿಕಾರಿಯನ್ನು ಕರ್ತವ್ಯದಿಂದ ಅಮಾನತು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಷ್ಟೇ ಎಂದರು.

Related