ಪತ್ನಿಕೊಂದು ಸುಟ್ಟು ಪತಿ

ಪತ್ನಿಕೊಂದು ಸುಟ್ಟು ಪತಿ

ಹುಬ್ಬಳ್ಳಿ , ಮಾ. 01 : ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದು ಸುಟ್ಟು ಹಾಕಿದ ಪತಿರಾಯ ಅಪರಾಧಿ ಎಂದು ಇಲ್ಲಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಅಪರಾಧಿ ಪತಿ ಈರಣ್ಣ ಬಸವರಾಜ ಕಮ್ಮಾರ ಎಂಬಾತಗೆ ಮಾರ್ಚ್ 3ಕ್ಕೆ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿ, ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಎನ್ ಅವರು ತೀರ್ಪು ನೀಡಿದ್ದಾರೆ.
ಪ್ರಕರಣ ಏನು: ನವಲಗುಂದ ತಾಲೂಕಿನ ತುಪ್ಪದ ಕುರಹಟ್ಟಿಯ ಫಕೀರಪ್ಪಾ ಬಸಪ್ಪಾ ಕುರಹಟ್ಟಿ ಅವರ ಮಗಳನ್ನು ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದ ಈರಣ್ಣ ಬಸವರಾಜ ಕಮ್ಮಾರ ಅವರಿಗೆ 2013ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಆಗ 50 ಸಾವಿರ ರೂ. ನಗದು, 6 ತೊಲೆ ಬಂಗಾರ, ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಿ, 9 ತೊಲೆ ಬಂಗಾರದ ಆಭರಣ ಹಾಕಿ ಮದುವೆ ಮಾಡಲಾಗಿತ್ತು.

Related