ದಚ್ಚು ನಟ ಅವಿನಾಶ್ ರನ್ನು ಬೈದಿದ್ದೇಕೆ?

ದಚ್ಚು ನಟ ಅವಿನಾಶ್ ರನ್ನು ಬೈದಿದ್ದೇಕೆ?

ಬೆಂಗಳೂರು, ಫೆ. 5 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಗಳಿಗೆ ಸದಾ ಬೆಂಬಲ ನೀಡುತ್ತ ಬಂದವರು, ಹೀಗಾಗಿ ದೊಡ್ಡ ಮನಸ್ಸಿನ ನಟ ಅನ್ನೋ ಪ್ರಖ್ಯಾತಿಗೂ ಪಾತ್ರರಾಗಿದ್ದಾರೆ.
ಇಂತಹ ದರ್ಶನ್ ‘ಮೌನಂ’ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಮಿಸುವ ವಿಚಾರಕ್ಕೆ ಹಿರಿಯ ನಟ ಅವಿನಾಶ್ ಅವರನ್ನು ಬೈದರಂತೆ! ಯಾಕೆ, ಆಶ್ಚರ್ಯ ಆಗ್ತಿದ್ರೂ ಸತ್ಯ. ಆಡಿಯೋ ಬಿಡುಗಡೆಗೆ ದರ್ಶನ್ ಅವರನ್ನು ಕರೆಸುವ ಜವಾಬ್ದಾರಿಯನ್ನು ಚಿತ್ರತಂಡ ಅವಿನಾಶ್ ಅವರಿಗೆ ವಹಿಸಿತ್ತು ಆದರೆ ದಚ್ಚು ತುಂಬಾ ಬಿಝಿಯಾಗಿದ್ದ ಕಾರಣ ಬನ್ನಿ ಅಂತ ಫೋನ್ ಮಾಡೋದು ಹ್ಯಾಗೆ ಅಂತ ಅವಿನಾಶ್ ಸ್ವಲ್ಪ ಹಿಂದೇಟು ಹಾಕಿದ್ದರಂತೆ, ಹೀಗಾಗಿ ಗೆಳೆಯ ದೇವರಾಜ್ ಅವರಿಗೆ ಆ ಹೊಣೆಯನ್ನ ವಹಿಸಿದ್ದರಂತೆ. ದರ್ಶನ್, “ಹಿರಿಯ ನಟರಾದ ನೀವು ನಮ್ಮನ್ನ ಕರೆಯೋದಕ್ಕೆ ಹಿಂದೆ ಮುಂದೆ ನೋಡೋ ಅಗತ್ಯವಿಲ್ಲ , ಎಲ್ಲಿಗೆ ಬರಬೇಕು ಹೇಳಿ ಬರ್ತೀನಿ ಸದಾ ನಿಮ್ಮ ಬೆಂಬಲಕ್ಕೆ ನಿಲ್ತೀವಿ’ ಎಂದು ಪ್ರೀತಿಯಿಂದಲೇ ಬೈದಿದ್ದಾರೆ. “ಇದು ನಿಜಕ್ಕೂ ದೊಡ್ಡ ನಟನ ದೊಡ್ಡತನ” ಎಂದು ದರ್ಶನ್ ಎದುರು ನಟ ಅವಿನಾಶ್ ಮನದುಂಬಿ ಹೇಳಿದ್ದಾರೆ.

Related