ನೆನೆಸಿಟ್ಟ ಸೌತೆಕಾಯಿಯ ನೀರು ಸೇವಿಸಿದರೆ ಏನಾಗುತ್ತದೆ

ನೆನೆಸಿಟ್ಟ ಸೌತೆಕಾಯಿಯ ನೀರು ಸೇವಿಸಿದರೆ ಏನಾಗುತ್ತದೆ

ಬೆಳಿಗ್ಗೆ ಎದ್ದ ತಕ್ಷಣ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಿಸಿ ನೀರು, ಗ್ರೀನ್ ಟೀ,  ಎಳನೀರು, ಟೀ, ಕಾಫಿ ಇನ್ನಿತರ ದ್ರವ ರೂಪದಲ್ಲಿ ಸೇವನೆ ಮಾಡುತ್ತಾರೆ.

ಆದರೆ ರಾತ್ರಿ ಇಡೀ ನೀರಿನಲ್ಲಿ ಸೌತೆಕಾಯಿಯ ಹೋಳುಗಳನ್ನು ನೆನೆಸಿಟ್ಟು, ಆ ನೀರನ್ನು ಬೆಳಗ್ಗೆ ನಾವು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ವಿವಿಧ ರೀತಿಯ ಬದಲಾವಣೆಗಳನ್ನು ಕಂಡುಕೊಳ್ಳಬಹುದು.

ಹೌದು, ಬೆಳಗ್ಗೆ ಎದ್ದ ತಕ್ಷಣ ಸೌತೆಕಾಯಿ ನೆನೆಸಿಟ್ಟ ನೀರನ್ನು ಸೇವನೆ ಮಾಡಿದರೆ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನ ದೇಹದಿಂದ ಹೊರ ಹಾಕಿ ದೇಹ ಶುದ್ಧಿ ಮಾಡುತ್ತದೆ.

ನಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಇರುತ್ತದೆ. ಉಪ್ಪು ರಕ್ತದೊತ್ತಡಕ್ಕೆ ಮುಖ್ಯ ಕಾರಣವಾಗಿದೆ. ಹಾಗಾಗಿ ಸೌತೆಕಾಯಿ ನೆನೆಸಿಟ್ಟ ನೀರನ್ನು ಸೇವನೆ ಮಾಡಿದರೆ, ಇದರಲ್ಲಿರುವ ಪೊಟ್ಯಾಶಿಯಮ್, ಎಲೆಕ್ಟ್ರೋಲೈಟ್ ನಂತೆ ಕೆಲಸ ಮಾಡಿ ಸೋಡಿಯಂ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ತ್ವಚೆಯ ಆರೋಗ್ಯವನ್ನು ಒಳಗಿನಿಂದ ಮತ್ತು ಹೊರಗಿನಿಂದ ಕಾಪಾಡಲು ಇದು ಸಹಕಾರಿಯಾಗಿದೆ.  ಇದರಲ್ಲಿರುವ ವಿಟಮಿನ್ ಬಿ5 ಆರೋಗ್ಯಕಾರಿ ವರ್ಣವನ್ನು ನೀಡುತ್ತದೆ.

ಸೌತೆಕಾಯಿಯಲ್ಲಿರುವ ವಿಟಮಿನ್ ಕೆ ಅಂಶವು ಪ್ರೋಟಿನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ. ಇದರಿಂದಾಗಿ ನಮ್ಮ ದೇಹದ ಮೂಳೆಗಳ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.ರಕ್ತ ಹೆಪ್ಪುಗಟ್ಟುವಿಕೆ ನಿಯಂತ್ರಿಸಲೂ ಇದು ಸಹಕಾರಿ.

ಪದೇ ಪದೇ ಹಸಿವಾಗುವುದನ್ನು ತಡೆಯಲು ಸೌತೆಕಾಯಿ ಸಹಕಾರಿಯಾಗಿದೆ. ಜೊತೆಗೆ ದೇಹಕ್ಕೆ ಎನರ್ಜಿ ನೀಡುತ್ತದೆ. ಇದರಲ್ಲಿರುವ ಫಿಸ್ಟೆನ್ ಅಂಶ ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಸೌತೆ ಕಾಯಿಯಲ್ಲಿರುವ ಡೈಯೆಟರಿ ಫೈನರ್ ಅಂಶ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಸೌತೆಕಾಯಿ ಸಿಪ್ಪೆಯಲ್ಲಿರುವ ಕರಗದ ಫೈಬರ್ ಅಂಶ ಆಹಾರ ಸುಲಭವಾಗಿ ಅನ್ನನಾಳದಲ್ಲಿ ಇಳಿದು ಹೋಗಲು ಸಹಕಾರಿಯಾಗಿದೆ.

Related