ರಾಮ ಮಂದಿರ ಬೇಟೆಗೆ ಗೃಹ ಸಚಿವರು ಹೇಳಿದ್ದೇನು?

ರಾಮ ಮಂದಿರ ಬೇಟೆಗೆ ಗೃಹ ಸಚಿವರು ಹೇಳಿದ್ದೇನು?

ಬೆಂಗಳೂರು: ಅಯೋಧ್ಯೆಯಲ್ಲಿ ಇದೇ ಜನವರಿ 22ನೇ ತಾರೀಕಿನಂದು ರಾಮ ಮಂದಿರ ಉದ್ಘಾಟನೆ ನಡೆಯಲಿದ್ದು ಈ ಉದ್ಘಾಟನಾ ಸಮಾರಂಭಕ್ಕೆ ಕಾಂಗ್ರೆಸ್ ನ ಹೈಕಮಾಂಡ್ ಅಧಿಕಾರಿಗಳು ಹೋಗುವುದಿಲ್ಲವೆಂದು ಈಗಾಗಲೇ ತಿಳಿದು ಬಂದಿದೆ.

ಇನ್ನು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕದ ಗೃಹ ಸಚಿವರಾಗಿರುವಂತಹ ಪರಮೇಶ್ವರ್ ಅವರು, ಒಂದು ವೇಳೆ ಅಯೋಧ್ಯ ರಾಮಮಂದಿರ ಉದ್ಘಾಟನೆ ನಂತರ ಕಾಂಗ್ರೆಸ್ನ ಹೈಕಮಾಂಡ್ ಅಧಿಕಾರಿಗಳು ರಾಮಮಂದಿರಕ್ಕೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನಮ್ಮ ರಾಜ್ಯದವರು ಕೂಡ ಅದೇ ಪ್ರಕಾರ ನಡೆದುಕೊಳ್ಳುತ್ತಾರೆ ಎಂದು ಹೇಳಿದರು.

ಹೈಕಮಾಂಡ್ ವಿರುದ್ಧ ನಾವೆಂದು ಮಾತನಾಡುವುದಿಲ್ಲ ಹೈಕಮಾಂಡ್ ತೀರ್ಮಾನವೇ ನಮ್ಮ ತೀರ್ಮಾನ ಹಾಗಾಗಿ ಎಲ್ಲ ತೀರ್ಮಾನವು ಹೈಕಮಾಂಡ್ ಮೇಲೆ ನಿಂತಿದೆ ಎಂದು ಹೇಳಿದರು.

Related