ವಾರಿಯರ್ಸ್ ಗೆ ಹೆಲ್ತ್ ಕಿಟ್ ವಿತರಣೆ

ವಾರಿಯರ್ಸ್ ಗೆ ಹೆಲ್ತ್ ಕಿಟ್ ವಿತರಣೆ

ಬೆಂಗಳೂರು : ನಾಗರಬಾವಿಯಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಹೋವ್ ಇಟ್ ವಾರಿಯರ್ಸ್ಗಳು ಪತ್ರಕರ್ತರು ಮತ್ತು ಪೊಲೀಸರಿಗೆ ಉಚಿತವಾಗಿ ವೈದ್ಯಕೀಯ ಕಿಟ್ ವಿತರಿಸಲಾಯಿತು.

ನಿವೃತ್ತ ಹಿರಿಯ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಎಂ. ಸೋಮಶೇಖರ್‌ಅವರು ತಮ್ಮ ಮನೆಯ ಮುಂದೆಯೇ ನಡೆದ ಸರಳ ಕಾರ್ಯಕ್ರಮದಲ್ಲಿ ನೂರಾರು ಮಂದಿಗೆ ಕಿಟ್ ಗಳನ್ನು ವಿತರಿಸಿದರು.

ಕು. ಎಸ್.ಅರ್. ಯಶಸ್ವಿನಿ ಅವರ5ನೇ ವರ್ಷದ ಪುಣ್ಯ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಹ್ಯಾಂಡ್ ವಾಶ್ ಸ್ಯಾನಿಟೈಸರ್ ಮಾತು ಗ್ಲೌಸ್,ಡೆಟಾಲ್, ನ್ಯಾಪ್ಕಿನ್ ಫ್ಲೋರ್, ವಾಷಿಂಗ್ ಸೇರಿದಂತೆ ಸುಮಾರು ಒಂದು ಸಾವಿರ ರೂಪಾಯಿಗೂ ಹೆಚ್ಚು ಬೆಲೆಬಾಳುವ ಸ್ವಚ್ಛತೆಗೆ ಸಂಬಧಿಸಿದ ಮೆಡಿಕಲ್ ಸೀಟ್‌ಗಳನ್ನು ಸೋಮಶೇಖರ್ ಅವರು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೋಮಶೇಖರ್ ಅವರು, ರಾಜ್ಯಾದ್ಯಂತ ಕೋವಿಂದ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಎಲ್ಲರೂ ಪ್ರಾಣಕ್ಕೆ ಹೆದರಿ ಬದುಕುವಂತಾಗಿದೆ. ಇಂತಹ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆಸಲ್ಲಿಸುತ್ತಿರುವ ಪತ್ರಕರ್ತರು ಮತ್ತು ಪೊಲೀಸರು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಇವರ ನೈತಿಕ ಸ್ಥೈರ್ಯ ಹೆಚ್ಚಿಸಲು ನಾವು ಅವರಿಗೆ ಯಾವುದೇ ಸಹಾಯ ಮಾಡಿದರೂ ಸಾಲುವುದಿಲ್ಲ ಎಂದರು.

Related