ಅಗರ ಕೆರೆಯ ಉದ್ಯಾನವನದಲ್ಲಿ ಮತ ಪ್ರಚಾರ ನಡೆಸಿದ ಸತೀಶ್ ರೆಡ್ಡಿ

ಅಗರ ಕೆರೆಯ ಉದ್ಯಾನವನದಲ್ಲಿ ಮತ ಪ್ರಚಾರ ನಡೆಸಿದ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಸಿನಿಮಾ ನಟರ ಜೊತೆ ನಂಟು ಉಳಿಸಿಕೊಳ್ಳದ ನಿರ್ಮಾಪಕ ಜನರ ನಂಬಿಕೆ ಹಾಗೂ ನಂಟನ್ನು ಉಳಿಸಿಕೊಳ್ಳುತ್ತಾರಾ ಎಂದು ಶಾಸಕ ಎಂ. ಸತೀಶ್ ರೆಡ್ಡಿ ವಾಗ್ದಾಳಿ ನಡೆಸಿದರು.

ಹೆಚ್.ಎಸ್.ಆರ್. ಲೇಔಟ್ ಅಗರ ಕೆರೆಯ ಉದ್ಯಾನವನದಲ್ಲಿ  ಇಂದು ಸಂಸದ ತೇಜಸ್ವಿ ಸರ್ಯ ಹಾಗೂ ಶಾಸಕ ಎಂ. ಸತೀಶ್ ರೆಡ್ಡಿಯವರು ಮತ ಪ್ರಚಾರ ನಡೆಸಿ ಕೇಂದ್ರ ಹಾಗೂ ರಾಜ್ಯ ಯೋಜನೆಗಳು ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಸ್ಥಳೀಯ ನಿವಾಸಿಗಳಿಗೆ ತಿಳಿಸಿ ಮತ ಯಾಚಿಸಿದರು.

ನಂತರ  ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ರೆಡ್ಡಿರವರು ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಅವಧಿಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರ  ಅತೀ ಹೆಚ್ಚು ಅಭಿವೃದ್ಧಿ ಹೊಂದಿದೆ. ನಮ್ಮ ವಿರುದ್ಧ ಆರೋಪ ಮಾಡಲು ಯಾವುದೇ ವಿಚಾರ ಸಿಗುತ್ತಿಲ್ಲ. ಆದರೂ ಚುನಾವಣೆ ಸಂದಂರ್ಭದಲ್ಲಿ ರಾಜಕೀಯ ದುರುದ್ದೇಶದಿಂದ ಇಲ್ಲ ಸಲ್ಲದ ಆರೋಪವನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡುತ್ತಿದ್ದಾರೆ. ನನ್ನ ಮೇಲಿನ ಪ್ರೀತಿ ವಿಶ್ವಾಸ ಮತ್ತು ಕ್ಷೇತ್ರದ ಅಭಿವೃದ್ಧಿ ಕಂಡು ನಟ ದರ್ಶನ್, ಯಶ್ ಮತ್ತು ಸುದೀಪ್ ನನ್ನ ಪರ ಪ್ರಚಾರ ಮಾಡಿದ್ದಾರೆ. ಅಷ್ಟಕ್ಕೆ ನಟ ದರ್ಶನ್‌ರನ್ನು ಅನಗತ್ಯವಾಗಿ ವಿವಾದಕ್ಕೆ ಎಳೆದು ತರಲಾಗುತ್ತಿದೆ. ಒಬ್ಬ ನಿರ್ಮಾಪಕನಾಗಿ ನಟರ ಜೊತೆ ಸ್ನೇಹ ಉಳಿಸಿಕೊಳ್ಳವ ಯೋಗ್ಯತೆ ಉಮಾಪತಿಗೆ ಇಲ್ಲ. ಮತ್ತೆ ಯಾವ ರೀತಿ ಜನರ ವಿಶ್ವಾಸ ಉಳಿಸಿಕೊಳ್ಳುತ್ತಾನೆ. ಹೊಟ್ಟೆ ಉರಿ ಮತ್ತು ಹತಾಶೆಯಿಂದ ದರ್ಶನ್, ಸುದೀಪ್ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಂಸದ ತೇಜಸ್ವಿ ಸರ‍್ಯರವರು, ಅಗರ ಕೆರೆ ಕೇವಲ 4 ವರ್ಷಗಳ ಹಿಂದೆ ಸಮಸ್ಯೆಗಳ ಆಗರವಾಗಿತ್ತು. ಕೆರೆ ಒತ್ತುವರಿಯಾಗಿತ್ತು. ನೀರು ಕಲುಷಿತಗೊಂಡಿತ್ತು. ಪಕ್ಷಿಗಳು ವಲಸೆ ಬರುವುದು ಕ್ಷೀಣಿಸಿತ್ತು. ಆದರೆ ಸತೀಶ್ ರೆಡ್ಡಿಯವರು ರಾಜ್ಯ ಸರ್ಕಾರದ ಸಹಕಾರದಿಂದ ಕಾಯಕಲ್ಪ ರೂಪಿಸಿದ್ದಾರೆ. ವಿದೇಶಗಳಿಂದ ಇಲ್ಲಿಗೆ ಪಕ್ಷಿಗಳು ಬರುತ್ತಿವೆ. ಇವೆಲ್ಲವೂ ಸತೀಶ್ ರೆಡ್ಡಿಯವರ ಅಭಿವೃದ್ದಿ ಮಂತ್ರವಷ್ಟೇ. ಮತ್ತೊಮ್ಮೆ ಸತೀಶ್ ರೆಡ್ಡಿಯವರಿಗೆ ಮತ ನೀಡಿ ಕಮಲ ಅರಳಿಸಲು ಸಹಕರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬೆಂ.ದಕ್ಷಿಣ ಲೋಕಸಭಾ ಸಂಸದರಾದ ತೇಜಸ್ವಿ ಸರ್ಯ ರವರು, ಸ್ಥಳೀಯ ನಿವಾಸಿಗಳು ಮತ್ತಿತರರು ಉಪಸ್ಥಿತರಿದ್ದರು.

 

Related