ವಿಜಯ್ ದಿವಸ್; ಯೋಧರಿಗೆ ನಮನ

ವಿಜಯ್ ದಿವಸ್; ಯೋಧರಿಗೆ ನಮನ

ನವದೆಹಲಿ: ಬಾಂಗ್ಲಾ ವಿಮೋಚನೆಗೆ ಕಾರಣವಾದ ಭಾರತ-ಪಾಕಿಸ್ತಾನ ನಡುವಿನ 1971ರ ಯುದ್ಧ ಗೆಲುವಿಗೆ ಇಂದು 50 ವರ್ಷ.

ಈ ಹಿನ್ನಲೆ ವಿಜಯ್ ದಿವಸ್ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಮ್ ವಿಜಯ್ ಮಾಷಲ್ ಜ್ಯೋತಿಯನ್ನು ಬೆಳಗುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಇದೇ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಮ್ ವಿಜಯ ದಿವಸ ಲಾಂಛನವನ್ನು ಬಿಡುಗಡೆ ಮಾಡಿದರು.

ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾ ವಿಮೋಚನೆಗಾಗಿ 1971ರ ಡಿಸೆಂಬರ್ 3ರಂದು ಭಾರತ ಪಾಕ್ ವಿರುದ್ಧ ಸಮರಕ್ಕೆ ಸಜ್ಜಾಯಿತು. 13 ದಿನಗಳ ಕಾಲ ನಡೆದ ಉಭಯ ದೇಶಗಳ ಯುದ್ಧದಲ್ಲಿ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು. 1971ರ ಡಿಸೆಂಬರ್ 16ರಂದು ಈ ಯುದ್ಧದ ಗೆಲುವಿನೊಂದಿಗೆ ಬಾಂಗ್ಲಾದೇಶ ಉದಯವಾಯಿತು.

Related