ರಾಮರಾಜ್ಯ ನಮ್ಮ ಉದ್ದೇಶ: ಲಕ್ಷ್ಮಿ ಹೆಬ್ಬಾಳಕರ್‌

ರಾಮರಾಜ್ಯ ನಮ್ಮ ಉದ್ದೇಶ: ಲಕ್ಷ್ಮಿ ಹೆಬ್ಬಾಳಕರ್‌

ಬೆಳಗಾವಿ: ನಮ್ಮ ಕರ್ನಾಟಕ ರಾಜ್ಯವನ್ನು ರಾಮರಾಜ್ಯ ಮಾಡುವ ಉದ್ದೇಶವನ್ನು ನಮ್ಮ ಕಾಂಗ್ರೆಸ್ ಪಕ್ಷ ಹೊಂದಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡ ರಾಮಭಕ್ತಳು, ಕರ್ನಾಟಕ ರಾಜ್ಯವನ್ನು ರಾಮ ರಾಜ್ಯ ಮಾಡಬೇಕೆಂದು ಪಣತೊಟ್ಟಿದ್ದೇವೆ. ಹಾಗಾಗಿ ಈಗಾಗಲೇ ನಾವು ರಾಜ್ಯದಲ್ಲಿ ರಸ್ತೆ, ಶಾಲೆ ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಗ್ಯಾರೆಂಟಿಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿದರು.

ನಮ್ಮ ಸರ್ಕಾರ, ಸಿದ್ದರಾಮಯ್ಯನವರ ಮುಖಂಡತ್ವದಲ್ಲಿ ಚಾಚೂ ತಪ್ಪದೇ ರಾಮರಾಜ್ಯದ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದೆ. ಮನೆ, ಮನೆಯಲ್ಲಿ ರಾಮರಾಜ್ಯ ನಿರ್ಮಾಣ ಮಾಡಬೇಕೆನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.

 

Related