ರೈಲು ಹೊರಡಲು ಕ್ಷಣಗಣನೆ

  • In State
  • May 13, 2020
  • 434 Views
ರೈಲು ಹೊರಡಲು ಕ್ಷಣಗಣನೆ

ಹುಬ್ಬಳ್ಳಿ,ಮೇ. 13 : ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಮೇ. 17ರವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರೈಲು, ಮೆಟ್ರೋ ಮತ್ತು ಅಂತರಾಜ್ಯ ಸಾರಿಗೆ ಸಂಚಾರ ನಿಷೇಧಿಲಾಗಿತ್ತು.
ಕಾರ್ಮಿಕರನ್ನು ಹೊತ್ತು ಹುಬ್ಬಳ್ಳಿ ರೈಲು ನಿಲ್ದಾಣದಿಂದ ರಾಜಸ್ಥಾನದ ಜೋಧಪುರಕ್ಕೆ ಮಧ್ಯಾಹ್ನ 12ಕ್ಕೆ ಶ್ರಮಿಕ್ ವಿಶೇಷ ರೈಲು ಹೊರಡಲು ಕ್ಷಣಗಣನೆ ಆರಂಭವಾಗಿದೆ.
ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಾಯಿತ ರಾಜಸ್ಥಾನ ಮೂಲದ ಕಾರ್ಮಿಕರು, ನಿಲ್ದಾಣದ ಬಳಿ ತೆರೆದಿರುವ 15 ಕೌಂಟರ್ಗಳಲ್ಲಿ 1452 ಮಂದಿ ತಮ್ಮ ಹೆಸರನ್ನು ಪ್ರಯಾಣಕ್ಕೆ ನೋಂದಣಿ ಮಾಡಿಕೊಂಡರು.
ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ, ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು. ಜಿಲ್ಲಾಡಳಿತದಿಂದ ಎಲ್ಲರಿಗೂ ಬೆಳಿಗ್ಗೆ ಉಪಾಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ನಿಲ್ದಾಣಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಭೇಟಿ ನೀಡಿ, ಪ್ರಯಾಣಿಕರಿಗೆ ಶುಭ ಕೋರಿದರು.

Related