ಎಂಟು ರಾಜ್ಯಗಳಿಗೆ ಧಾರಾಕಾರ ಮಳೆ, ಪ್ರವಾಹದ ಎಚ್ಚರಿಕೆ

ಎಂಟು ರಾಜ್ಯಗಳಿಗೆ ಧಾರಾಕಾರ ಮಳೆ, ಪ್ರವಾಹದ ಎಚ್ಚರಿಕೆ

ನವದೆಹಲಿ,ಜು.14: ಪಶ್ಚಿಮ ಕರಾವಳಿ, ಮಧ್ಯ ಭಾರತದ ಎಂಟು ರಾಜ್ಯಗಳಲ್ಲಿ ಗುರುವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ. 22 ನದಿ ತಾಣಗಳಲ್ಲಿ ಎಚ್ಚರಿಕೆಯ ಮಟ್ಟಕ್ಕಿಂತ ಹೆಚ್ಚಿನ ನೀರು ಹರಿಯುವುದರಿಂದ ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ನಿರೀಕ್ಷೆಯಿದೆ.

ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ತೆಲಂಗಾಣ, ಮಹಾರಾಷ್ಟ್ರ, ಅಸ್ಸಾಂ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬಂದಿದೆ. ಅಲ್ಲದೆ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ 31 ಅಣೆಕಟ್ಟುಗಳು ಮತ್ತು ಬ್ಯಾರೇಜ್‌ಗಳಿಗೆ ಹೆಚ್ಚಿನ ಒಳಹರಿವಿನ ಮುನ್ಸೂಚನೆ ನೀಡಲಾಗಿದೆ.

 

 

 

Related