ತೆರೆ ಮೇಲೆ ಅಬ್ಬರಿಸಲಿದೆ ಮಾಯೆ ಅಂಡ್ ಕಂಪನಿ

ತೆರೆ ಮೇಲೆ ಅಬ್ಬರಿಸಲಿದೆ ಮಾಯೆ ಅಂಡ್ ಕಂಪನಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಸೋಶಿಯಲ್ ಮೀಡಿಯ ಅನ್ನೋದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದೆ. ಸೋಶಿಯಲ್ ಮೀಡಿಯ ಅನ್ನೋದು ಇದೊಂದು ಬಹಿರಂಗ ವೇದಿಕೆಯಾಗಿದ್ದು ಇದರಲ್ಲಿ ಒಳ್ಳೆ ಮತ್ತು ಕೆಟ್ಟ ಘಟನೆಗಳನ್ನು ನೋಡಬಹುದು.

ಇನ್ನು ಸೋಶಿಯಲ್ ಮೀಡಿಯಾದಿಂದ ಯುವ ಪೀಳಿಗೆಗೆ ಯಾವೆಲ್ಲ ಅನುಕೂಲ ಮತ್ತು ಅನಾನುಕೂಲ ನಡೆಯುತ್ತಿದೆ ಎನ್ನುವುದನ್ನು ಮನದಲ್ಲಿಟ್ಟುಕೊಂಡು ನಿರ್ಮಾಪಕ ಸಂದೀಪ್ ಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಆಧುನಿಕ ಜಗತ್ತು ಬೆಳೆಯುತ್ತಿದ್ದಂತೆ ಹೊಸ ಹೊಸ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿರುವ ಬದಲಾವಣೆಗಳು ವಿಭಿನ್ನ ರೂಪವನ್ನು ಪಡೆದು ಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಗಳಿಂದ ಆಗುತ್ತಿರುವ ಒಂದಷ್ಟು ಬದಲಾವಣೆ ಹಾಗೂ ಅನಾಹುತಗಳ ಕುರಿತಾದಂತ ಎಳೆಯೊಂದಿಗೆ ಸಸ್ಪೆನ್ಸ್, ಡ್ರಿಲ್ಲರ್ ಮೂಲಕ ನಿರ್ಮಾಣಗೊಂಡಿರುವ ಮಾಯೆ ಅಂಡ್ ಕಂಪನಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು.

ಕಳೆದ 34 ವರ್ಷಗಳಿಂದ ದೂರದರ್ಶನ ಕೇಂದ್ರದಲ್ಲಿ ಸಂಕಲನಕಾರರಾಗಿ ಕೆಲಸಮಾಡಿ, ಈಗ ನಿವೃತ್ತಿ ಹೊಂದಿರುವ ಎಂ.ಎನ್. ರವೀಂದ್ರರಾವ್ ಅವರು ಮಾತೃಶ್ರೀ ವಿಷನ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿರುವ ಚಿತ್ರ ಮಾಯೆ ಅಂಡ್ ಕಂಪನಿ. ಸಂದೀಪ್ ಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದು, ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಮಾಯೆ ಅಂಡ್ ಕಂಪನಿ ಸಿನಿಮಾದಲ್ಲಿ ಎಲ್ಲಾ ಹೊಸ ಪ್ರತಿಭೆಗಳೆ ಸೇರಿಕೊಂಡು ಮಾಡಿರುವಂತಹ ಸಿನಿಮಾ ಇದಾಗಿದೆ.

ಇನ್ನು ಚಿತ್ರವು ರಾಜದಾದ್ಯಂತ ಇದೆ ಫೆಬ್ರವರಿ 9ರಂದು ರಿಲೀಸ್ ಆಗುತ್ತಿದ್ದು ಪ್ರೇಕ್ಷಕರನ್ನು ಈ ಸಿನಿಮಾವನ್ನು ಯಾವ ರೀತಿ ಬರಮಾಡಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ

Related