ಗೋಳು ಕೇಳುವವರಿಲ್ಲ

ಗೋಳು ಕೇಳುವವರಿಲ್ಲ

ಗಜೇಂದ್ರಗಡ : ಪಟ್ಟಣದ ಎಪಿಎಂಸಿ ವಿನಾಯಕ ದೇವಸ್ಥಾನದಲ್ಲಿ ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆಯಡಿಯಲ್ಲಿ ಹಮಾಲಿ, ಕಾರ್ಮಿಕರ ಸ್ಮಾರ್ಟ್ಕಾರ್ಡ್ ವಿತರಣೆ ಹಾಗೂ ಹಿರಿಯ ಶ್ರಮಜೀವಿಗಳ ಸನ್ಮಾನ ನಡೆಯಿತು.

ಶಾಸಕ ಕಳಕಪ್ಪಬಂಡಿ ಮಾತನಾಡಿ, ಕೊರೋನಾ ಜನರಿಗೆ ಮೃತ್ಯುವಾಗಿ ಕಾಡುತ್ತಿದೆ. ಕುಟುಂಬಗಳು ಬೀದಿಗೆ ಬಿದ್ದಿವೆ. ದುಡಿಯುವ ವರ್ಗಕ್ಕೆ ಬಾರಿ ಹೊಡೆತ ಬಿದ್ದಿದೆ. ರೈತರ ಗೋಳು ಕೇಳುವವರಿಲ್ಲ ಎಂದರು.

ರೈತರು ಎಪಿಎಂಸಿಗೆ ದೇವರು ಇದ್ದಂತೆ, ರೈತರು ಬೆಳೆಗಳನ್ನು ಬೆಳೆದರೆ ಮಾತ್ರ ಎಪಿಎಂಸಿಯಲ್ಲಿ ಕೆಲಸ. ಅದಕ್ಕಾಗಿ ರೈತರಿಗೆ ಬೆಲೆ ಕೊಡಿ, ಅವರು ಬೆಳೆದ ಅನ್ನದ ಋಣ ಎಂದಿಗೂ ತೀರಿಸೋಕೆ ಆಗಲ್ಲ ಎಂದು ಭಾವುಕರಾದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ದುಡಿಯುವ ವರ್ಗಕ್ಕೆ ಹಲವು ಯೋಜನೆಗಳನ್ನ ರೂಪಿಸಿದೆ. ಹೀಗಾಗಿ ಕೆಲ ಯೋಜನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು.

Related