ಬಳ್ಳಾರಿ : ಜಿಲ್ಲೆಯಲ್ಲಿ ಗೋಡೌನ್ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 160 ಕ್ವಿಂಟಾಲ್ 300 ಚೀಲ ಅನ್ನಭಾಗ್ಯ ಅಕ್ಕಿಯನ್ನು ಬಳ್ಳಾರಿ ತಾಲೂಕಿನ ಕುಡಿತಿನಿ ಪಟ್ಟಣದಲ್ಲಿ ಸೀಜ್ ಮಾಡಲಾಗಿದೆ.
ನೇತಾಜಿ ಶಾಲೆಯ ಹತ್ತಿರ ದಸ್ತಗೀರ್ ಎಂಬಾತನಿಗೆ ಸೇರಿದ ಶೆಡ್ನಲ್ಲಿ ಅಕ್ಕಿಯನ್ನು ಶೇಖರಣೆ ಮಾಡಲಾಗಿತ್ತು. ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಆಹಾರ ಇಲಾಖೆಯ ಜಂಟಿ ನರ್ದೇಶಕ ಶ್ರೀಧರ್, ಪ್ರೊಬೆಷನರಿ ಐಎಎಸ್ ರಾಹುಲ್ ಸಂಕನೂರ್, ತಹಸೀಲ್ದಾರ್ ನಾಗರಾಜ ಹಾಗೂ ಸ್ಥಳೀಯ ಪಿಎಸ್ಐ ನೇತೃತ್ವದಲ್ಲಿ ಶೆಡ್ ಮೇಲೆ ದಾಳಿ ನಡೆಸಿ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿವೆಂದು ತಿಳಿಸಿದರು.