ಧಾರವಾಡ, ಫೆ. 14: ರಾಜ್ಯದಲ್ಲಿ ಪ್ರಸ್ತುತ ಮಳೆ ಬೆಳೆ ಚೆನ್ನಾಗಿ ಇದೆ ಆದರೆ ಜಲ ಸಂಕಷ್ಟ ರಾಜ್ಯಕ್ಕೆ ಇನ್ನೂ ಇದೆ ಯುಗಾದಿ ನಂತರ ಪೂರ್ಣ ಭವಿಷ್ಯ ಹೇಳುತ್ತೇನೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದರು.
ಧಾರವಾಡ ನಡೆದ ವಿವಾಹ ಕಾರ್ಯಕ್ರಮದಲ್ಲಿ ನವ ದಂಪತಿಗಳಿಗೆ ಶುಭ ಹಾರೈಸಿದ ನಂತರ ಮಾತನಾಡಿದ ಅವರು, ಪ್ರವಾಹದ ವಿಚಾರದಲ್ಲಿ ಇನ್ನೂ ರಾಜ್ಯಕ್ಕೆ ಸಂಕಷ್ಟ ಇದೇ ರಾಜಕೀಯ ದೃಷ್ಟಿಯಿಂದಲೂ ಹಲವು ಬದಲಾವಣೆ ಆಗುತ್ತದೆ. ಯುಗಾದಿ ನಂತರ ಸ್ಪಷ್ಟ ಭವಿಷ್ಯ ಹೇಳುತ್ತೇನೆ ಎಂದರು.