ಬಡವರ ಅನ್ನಕ್ಕೆ ಕನ್ನ

ಬಡವರ ಅನ್ನಕ್ಕೆ ಕನ್ನ

ಗದಗ, ಫೆ. 07 : ಜಿಲ್ಲೆಯ ಪಡಿತರ ಫಲಾನುಭವಿಗಳು ನಿತ್ಯ ಪರದಾಡ್ತಿದ್ದಾರೆ. 3 ತಿಂಗಳಿಂದ ಅನ್ನಭಾಗ್ಯ ಅಕ್ಕಿಗೆ ಕೊಕ್ಕೆ ಬಿದ್ದಿದ್ದು, ನ್ಯಾಯ ಬೆಲೆ ಅಂಗಡಿಯವರು ಅನ್ಯಾಯ ಮಾಡ್ತಿದ್ದಾರೆ. ಸರ್ವರ್ ಪ್ರಾಬ್ಲಮ್ ಎಂಬ ಹಾರಿಕೆಯ ಉತ್ತರ ಮಾತ್ರ ಸಿಗ್ತಿದೆ.
3 ತಿಂಗಳಿಂದ ರೇಷನ್ ನೀಡದೇ ನ್ಯಾಯಬೆಲೆ ಅಂಗಡಿಯವರು ಫಲಾನುಭವಿಗಳನ್ನು ಸತಾಯಿಸುತ್ತಿದ್ದಾರೆ. ಗದಗ ಜಿಲ್ಲೆಯ ಅನೇಕ ಕಡೆಗಳಲ್ಲಿ ಕಳೆದ 3 ತಿಂಗಳಿಂದ ಸರ್ವರ್ ಸಮಸ್ಯೆ ಎಂದೇಳಿ ಫಲಾನುಭವಿಗಳಿಗೆ ನಾಳೆ ಬಾ, ನಾಡಿದ್ದು ಬಾ ಅಂತ ಮರಳಿ ಕಳಿಸುತ್ತಿದ್ದಾರೆ ಎಂದು ಫಲಾನುಭವಿ ಬಸವರಾಜ್ ಅರೋಪಿಸಿದ್ದಾರೆ.

ಸರ್ವರ್ ನೆಪದಲ್ಲಿ ಬಡವರ ಅನ್ನಕ್ಕೆ ಕನ್ನ ಹಾಕಲಾಗ್ತಿದೆ ಅಂತ ಅಕ್ಕಿ ಫಲಾನುಭವಿಗಳಿಗೆ ನೀಡದೇ ಕಾಳಸಂತೆಯಲ್ಲಿ ಮಾರಾಟವಾಗುತ್ತೆ ಎಂಬ ಆರೋಪ ಕೇಳಿಬರುತ್ತಿದೆ.

Related