ಬೆಂಗಳೂರು: ಗುರುವಾರ ಏಪ್ರಿಲ್ 18ರಂದು ಹುಬ್ಬಳ್ಳಿ ನಗರದಲ್ಲಿ ವಿಬಿವಿ ಕಾಲೇಜಿನಲ್ಲಿ ಹಾಡು ಹೋಗಲೇ ಚಾಕುವಿನಿಂದ ಹಿರಿದು ಕೊಲೆ ಮಾಡಿರುವ ಘಟನೆ ನಡೆದಿದ್ದು ಈ ಘಟನೆಯಿಂದ ಇಡೀ ರಾಜ್ಯದ ಜನತೆ ಬೆಚ್ಚಿಬಿಳಿಸಿರುವ ಘಟನೆ ಇದಾಗಿದೆ.
ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಾಗೂ ಆರೋಪಿ ಫಯಾಜ್ ಪ್ರೀತಿ ಮಾಡ್ತಿದ್ರು ಎಂಬಂತಹ ಚರ್ಚೆಗಳು ಇದೀಗ ನಡೆಯುತ್ತಿವೆ.
ನೇಹಾ ಮತ್ತು ಫಯಾಜ್ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದ್ದು ಅವರಿಬ್ಬರ ಫೋಟೋಗಳನ್ನು ಕೆಪಿಸಿಸಿ ಸೋಶಿಯಲ್ ಮೀಡಿಯಾದ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ರಾಜಕೀಯ ರಂಗದಲ್ಲಿ ಈ ಕೊಲೆಗೆ ಹಲವಾರು ಕಾರಣಗಳನ್ನು ನೀಡಲಾಗುತ್ತಿದ್ದು ಪ್ರೀತಿಯೋ ಅಥವಾ ರಾಜಕೀಯ ಕಾರಣವೋ ಎಂಬುದು ಎಲ್ಲರಲ್ಲೂ ಪ್ರಶ್ನೆಯಾಗಿ ಉಳಿದಿದೆ.
ಪ್ರೀತಿ ಮಾಡುವುದು ಮತ್ತು ನಿರಾಕರಿಸುವುದು ಅವರವರ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಅದೇನೆ ಇರಲಿ ಈಕೆಯ ಹತ್ಯೆ ಅಮಾನವೀಯವಾದದ್ದು. ತಪ್ಪಿತಸ್ಥ ನೀಚ ಮನಸ್ಥಿತಿಗೆ ಕಠಿಣ ಶಿಕ್ಷೆಯಾಗಲೇಬೇಕು
😞😱😓 pic.twitter.com/yvjA6UmhmG— Rekha Srinivas (@RekhaSri590) April 20, 2024