ರಾಯಚೂರು, ಫೆ. 18 : ಕೋಟಿ ವಿದ್ಯಗಿಂತ ಮೇಕೆ ವಿದ್ಯ ಮೇಲು. ತನ್ನನ್ನ ಸಾಕಿದ ಯಜಮಾನನ ಅಂತ್ಯಕ್ರಿಯೆಯಲ್ಲಿ ಮೇಕೆಯು ಭಾಗಿಯಾದ ಅಪರೂಪದ ಘಟನೆ ಜಿಲ್ಲೆಯ ಮರಕಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಅಮರಪ್ಪ ಕುರುಬರು(48) ನಿನ್ನೆ ಜಮೀನಿನಲ್ಲ ಹೃದಯಾಘಾತದಿಂದ ಮೃತಪಟ್ಟಿದ್ದರು. ಯಜಮಾನನ ಅಂತ್ಯಕ್ರಿಯೆ 1.5 ಕಿ.ಮೀ ದೂರದ ಸ್ಮಶಾನಕ್ಕೆ ಶವ ಸಾಗಿಸಲಾಗಿತ್ತು. ಜನರ ಮಧ್ಯೆ ಹೋಗಿ ಅಂತ್ಯಕ್ರಿಯೆಯಲ್ಲಿ ಮೇಕೆ ಭಾಗಿಯಾಗಿದೆ.