ಬಳ್ಳಾರಿ, ಏ. 06: ಬಳ್ಳಾರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಮುಂದಕ್ಕೆ ಸಾಗಿದೆ ,ಈ 6ನೇ ವ್ಯಕ್ತಿಯು ಬಳ್ಳಾರಿ ನಗರಕ್ಕೆ ಅಂಟಿಕೊಂಡಿರುವ ಗುಗ್ಗರಹಟ್ಟಿಯಲ್ಲಿ ಬೆಳಕಿಗೆ ಬಂದಿದೆ. ಈ ವಿಷಯವನ್ನು ಮನಗಂಡ ಜಿಲ್ಲಾಧಿಕಾರಿಗಳು ಕೊರೊನ ಪಾಸಿಟಿವ್ ಪತ್ತೆಯಾದ ಸ್ಥಳದಿಂದ ಸುತ್ತಲೂ ಒಂದು ಕಿಲೋಮೀಟರ್ ಪ್ರದೇಶವನ್ನು ಕಂಟೋನ್ಮೆಂಟ್ ಜೋನ್ ಎಂದು ಪ್ರಕಟಿಸಿ ಸ್ಥಳೀಯರು ಯಾರು ಹೊರಗೆ ಹೋಗದಂತೆ -ಅದೇ ರೀತಿಯಾಗಿ ಹೊರಗಿನಿಂದ ಹೊಸಬರು ಯಾರು ಒಳಗೆ ಬರದಂತೆ ವ್ಯಕ್ತಿಗಳನ್ನು , ಮತ್ತು ವಾಹನಗಳನ್ನು ನಿರ್ಬಂಧಿಸಿ ಹಲವು ಕಡೆ ರಸ್ತೆಗೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಗುಗ್ಗರಹಟ್ಟಿ ಪ್ರದೇಶದ ಪ್ರತಿಯೊಂದು ಮನೆಯನ್ನು, ಕುಟುಂಬದ ಸದ್ಯಸರನ್ನು ಗಣತಿ ತೆಗೆದುಕೊಂಡು ಪರಿಶೀಲಿಸುವ ಕಾರ್ಯವನ್ನು ಆಶಾ ಕಾರ್ಯಕರ್ತರ ಮೂಲಕ ನೆಡೆಸಲಾಗುತಿದೆ.
” ಒಟ್ಟಾರೆಯಾಗಿ ಹೆಚ್ಚುತ್ತಾ ಹೋಗುತ್ತಿರುವ ಕೊರೊನ ಸೋಂಕಿತರ ಸಂಖ್ಯೆಯಿಂದಾಗಿ ಬಳ್ಳಾರಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದ ಜನಗಳನ್ನು ದಿಗ್ಬ್ರಮೆಗೊಳಿಸಿದೆ “.
ಜಿಲ್ಲಾಧಿಕಾರಿ ಎಸ್. ನಕುಲ್ ರವರು ಮಾತನಾಡಿ, ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳಬೇಕು, ಕೊರೊನ ನಿಯಂತ್ರಿಸುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಸೂಚಿಸುವ ಕ್ರಮಗಳನ್ನು ಪ್ರತಿಯೊಬ್ಬರೂ ಚಾಚುತ್ತಪದೆ ಪಾಲಿಸಬೇಕು ತಿಳಿಸಿದರು.