ಗಣಿನಾಡಲ್ಲಿ 6ಕ್ಕೆ  ಏರಿದ  ಕೊರೊನ  ಸೋಂಕಿತರ  ಸಂಖ್ಯೆ

  • In State
  • April 6, 2020
  • 432 Views
ಗಣಿನಾಡಲ್ಲಿ 6ಕ್ಕೆ  ಏರಿದ  ಕೊರೊನ  ಸೋಂಕಿತರ  ಸಂಖ್ಯೆ

ಬಳ್ಳಾರಿ, ಏ. 06: ಬಳ್ಳಾರಿ  ಜಿಲ್ಲೆಯಲ್ಲಿ  ದಿನದಿಂದ  ದಿನಕ್ಕೆ  ಸೋಂಕಿತರ ಸಂಖ್ಯೆ ಏರುಗತಿಯಲ್ಲಿ  ಮುಂದಕ್ಕೆ  ಸಾಗಿದೆ ,ಈ 6ನೇ  ವ್ಯಕ್ತಿಯು  ಬಳ್ಳಾರಿ  ನಗರಕ್ಕೆ ಅಂಟಿಕೊಂಡಿರುವ ಗುಗ್ಗರಹಟ್ಟಿಯಲ್ಲಿ  ಬೆಳಕಿಗೆ  ಬಂದಿದೆ. ಈ ವಿಷಯವನ್ನು ಮನಗಂಡ ಜಿಲ್ಲಾಧಿಕಾರಿಗಳು ಕೊರೊನ  ಪಾಸಿಟಿವ್ ಪತ್ತೆಯಾದ ಸ್ಥಳದಿಂದ  ಸುತ್ತಲೂ ಒಂದು ಕಿಲೋಮೀಟರ್ ಪ್ರದೇಶವನ್ನು ಕಂಟೋನ್ಮೆಂಟ್  ಜೋನ್ ಎಂದು ಪ್ರಕಟಿಸಿ ಸ್ಥಳೀಯರು ಯಾರು ಹೊರಗೆ ಹೋಗದಂತೆ -ಅದೇ ರೀತಿಯಾಗಿ ಹೊರಗಿನಿಂದ ಹೊಸಬರು ಯಾರು ಒಳಗೆ ಬರದಂತೆ ವ್ಯಕ್ತಿಗಳನ್ನು , ಮತ್ತು  ವಾಹನಗಳನ್ನು ನಿರ್ಬಂಧಿಸಿ ಹಲವು ಕಡೆ ರಸ್ತೆಗೆ ಬ್ಯಾರಿಕೇಡ್ಗಳನ್ನು  ಅಳವಡಿಸಲಾಗಿದೆ ಎಂದು ತಿಳಿಸಿದರು.

ಗುಗ್ಗರಹಟ್ಟಿ ಪ್ರದೇಶದ ಪ್ರತಿಯೊಂದು ಮನೆಯನ್ನು, ಕುಟುಂಬದ ಸದ್ಯಸರನ್ನು ಗಣತಿ ತೆಗೆದುಕೊಂಡು ಪರಿಶೀಲಿಸುವ ಕಾರ್ಯವನ್ನು ಆಶಾ ಕಾರ್ಯಕರ್ತರ ಮೂಲಕ ನೆಡೆಸಲಾಗುತಿದೆ.

” ಒಟ್ಟಾರೆಯಾಗಿ ಹೆಚ್ಚುತ್ತಾ ಹೋಗುತ್ತಿರುವ ಕೊರೊನ ಸೋಂಕಿತರ ಸಂಖ್ಯೆಯಿಂದಾಗಿ ಬಳ್ಳಾರಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದ ಜನಗಳನ್ನು ದಿಗ್ಬ್ರಮೆಗೊಳಿಸಿದೆ “.

ಜಿಲ್ಲಾಧಿಕಾರಿ  ಎಸ್. ನಕುಲ್ ರವರು ಮಾತನಾಡಿ, ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳಬೇಕು, ಕೊರೊನ ನಿಯಂತ್ರಿಸುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ ಈ ನಿಟ್ಟಿನಲ್ಲಿ ಸರ್ಕಾರ  ಸೂಚಿಸುವ ಕ್ರಮಗಳನ್ನು ಪ್ರತಿಯೊಬ್ಬರೂ ಚಾಚುತ್ತಪದೆ ಪಾಲಿಸಬೇಕು ತಿಳಿಸಿದರು.

 

 

Related