ಚಿರತೆ ದಾಳಿ ಹಸುಗಳು ಬಲಿ

  • In State
  • March 14, 2020
  • 402 Views
ಚಿರತೆ ದಾಳಿ ಹಸುಗಳು ಬಲಿ

ತುರುವೇಕೆರೆ, ಮಾ. 14: ತಾಲ್ಲೂಕು ದಬ್ಬೇಘಟ್ಟ ಹೋಬಳಿ ತಂಡಗ ಗ್ರಾಮದ ಬೈರೇಗೌಡ ಎಂಬುವರ ತೋಟದ ಮನೆಯ ಮುಂದೆ ಶುಕ್ರವಾರ ತಡ ರಾತ್ರಿ ಚಿರತೆ ದಾಳಿ ಮಾಡಿ ಎರಡು ಹಸುಗಳನ್ನು ಬಲಿತೆಗೆದುಕೊಂಡಿದೆ.

ಕಳೆದ ಹಲವು ದಿನಗಳಿಂದ ಚಿರತೆ ದಾಳಿಯಿಂದ ಭಯಭೀತರಾಗಿರುವ ಜಿಲ್ಲೆಯ ಜನತೆಗೆ ಕಳೆದ ರಾತ್ರಿ ಜಾನುವಾರುಗಳ ಮೇಲಿನ ದಾಳಿಯಿಂದಾಗಿ ರಾತ್ರಿ ವೇಳೆ ಹೊರಗಡೆ ಬರಲಾಗದಂತಹ ಪರಿಸ್ಥಿ ಎದುರಾಗಿದ್ದು, ಕೂಡಲೇ ಅರಣ್ಯ ಇಲಾಖೆ ಚಿರತೆಗಳ ಹಾವಳಿಯಿಂದ ಜೀವ ಭಯದಿಂದ ಕಾಲ ಕಳೆಯುವಂತಾಗಿದೆ.

ಚಿರತೆ ದಾಳಿ ದಿನೇ ದಿನೇ ಜಾಸ್ತಿಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಚಿರತೆ ಹಿಡಿಯಬೇಕೆಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಇದೇ ತಂಡಗ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಸಾದರಹಳ್ಳಿ ಗ್ರಾಮದಲ್ಲಿಯೂ ಸಹ ಚಿರತೆಯು ಒಂದು ಕರುವಿಗೆ ದಾಳಿ ಮಾಡಲು ಮುಂದಾಗಿದೆ ತಕ್ಷಣ ಎಚ್ಚೆತ್ತ ಮಾಲೀಕರು ಕೂಗಾಡಿ ಚಿರತೆಯನ್ನು ಓಡಿಸಿದ್ದಾರೆ ತಕ್ಷಣ ಪಶುವೈದ್ಯಾಧಿಕಾರಿ ಡಾ.ಚಂದ್ರಯ್ಯ ಕರುವಿಗೆ ಚಿಕಿತ್ಸೆ ನೀಡಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿಸಿದರು.

Related