ಭರ್ತಿಯಾದ ನಡಿಹಾಳ ಕೆರೆಗೆ : ಶಾಸಕ ಭೇಟಿ

ಭರ್ತಿಯಾದ ನಡಿಹಾಳ ಕೆರೆಗೆ : ಶಾಸಕ ಭೇಟಿ

ಶಹಾಪುರ : ತಾಲೂಕಿನ ನಡಿಹಾಳ ಕೆರೆ ಇತ್ತಿಚಿನ ಮಳೆಯಿಂದಾಗಿ ಮತ್ತು ಕೆರೆ ಹೂಳೆತ್ತಿರುವುದರಿಂದ ಕೆರೆ ಭರ್ತಿಯಾಗಿದ್ದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ನಡಿಹಾಳ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಕುರಿತು ಪರ್ತಕರ್ತರಿಗೆ ಮಾಹಿತಿ ನೀಡಿ ಇಲ್ಲಿನ ಜನತೆಯ ಬಹುದಿನಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ನಡಿಹಾಳ ಕೆರೆ ಭರ್ತಿ ನೆನೆಗುದಿಗೆ ಬಿದ್ದಿತ್ತು. ಈ ಕೆರೆ ಪುನಶ್ಚೇತನ ಕಾಮಗಾರಿಗೆ ನೀರಾವರಿ ಇಲಾಖೆಯಿಂದ ರೂ.1ಕೋಟಿ ಅನುದಾನ ನೀಡಲಾಗಿತ್ತು.

ಸಧ್ಯ ಅನುದಾನದಡಿ ಬಂಡ್ ರಿಪೇರಿ ಮತ್ತು ಹೂಳೆತ್ತುವ ಕಾಮಗಾರಿ ನಡೆಸಲಾಗಿತ್ತು. ಇದರಿಂದಾಗಿ ಮತ್ತು ಇತ್ತಿಚಿನ ಮಳೆಯಿಂದಾಗಿ ಕೆರೆ ಭರ್ತಿಯಾಗಿದ್ದು ಅಂತರ್ಜಲ ಮಟ್ಟ ಹೆಚ್ಚಿಸಿದ್ದು ಸುತ್ತಲಿನ ಗ್ರಾಮಸ್ಥರ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಭವಣೆ ನೀಗಿಸಿದಂತಾಗಿ ಸುತ್ತಲಿನ ರೈತಾಪಿ ವರ್ಗದಲ್ಲಿ ಸಂತಸ ಮನೆ ಮಾಡಿದೆ ಎಂದು ತಿಳಿಸಿದರು.

Related