ಐಪಿಎಸ್ ಚರಣ್ ರೆಡ್ಡಿ ನಿಧನ

ಐಪಿಎಸ್ ಚರಣ್ ರೆಡ್ಡಿ ನಿಧನ

ಬೆಂಗಳೂರು,ಮಾ. 13 : ಎಡಿಜಿಪಿ ಆಗಿದ್ದ ಚರಣ್ ರೆಡ್ಡಿ (55) ಅವರು ಅನಾರೋಗ್ಯದಿಂದಾಗಿ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.
ಆಂದ್ರಪ್ರದೇಶದ ಚಿತ್ತೂರಿನ ಅವರು 1993ರಲ್ಲಿ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿ ವೃತ್ತಿ ಆರಂಭಿಸಿದ್ದರು. ಅಕ್ರಮ ಗಣಿ ಪ್ರಕರಣದಲ್ಲಿ ಸರ್ಕಾರ ನೇಮಿಸಿದ್ದ ಎಸ್ಐಟಿ ತಂಡದ ಮುಖ್ಯಸ್ಥರೂ ಆಗಿದ್ದ ಚರಣರೆಡ್ಡಿ, ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರನ್ನು ವಿಚಾರಣೆ ಮಾಡಿದ್ದರು. ವಿಜಯಪುರದಲ್ಲಿ ಚಡಚಣ ನಕಲಿ ಎನ್ಕೌಂಟರ್ ಪ್ರಕರಣದಲ್ಲೂ ಸಾಹುಕಾರ ಹಾಗೂ ಆತನ ಬೆಂಬಲಿಗರನ್ನು ಬಂಧಿಸಿದ್ದರು. ಪೊಲೀಸ್ ಅಧಿಕಾರಿಗಳನ್ನು ಜೈಲಿಗಟ್ಟಿದ್ದರು.

Related