ಬಿಜೆಪಿ ಆರೋಪ ಸತ್ಯಕ್ಕೆ ದೂರ-ಕಾಂಗ್ರೆಸ್

ಬಿಜೆಪಿ ಆರೋಪ ಸತ್ಯಕ್ಕೆ ದೂರ-ಕಾಂಗ್ರೆಸ್

ಸಂಡೂರು: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಟೌನ್‌ಹಾಲ್ ಮತ್ತು ಚೆಕ್‌ಡ್ಯಾಂ ಕಳಪೆ ಕಾಮಗಾರಿಗಳಿಂದ ಕೂಡಿವೆ ಎಂದು ಶಾಸಕರ ಮೇಲೆ ಬಿಜೆಪಿ ಮುಖಂಡ ಜಿ.ಟಿ.ಪಂಪಾಪತಿ ಆರೋಪಿಸಿದ್ದು ಸತ್ಯಕ್ಕೆ ದೂರವಾದದ್ದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್ ತಿಳಿಸಿದ್ದಾರೆ.
ದಾಖಲೆಗಳಿಲ್ಲದೆ ಹೊಟ್ಟೆಕಿಚ್ಚಿನಿಂದ, ಅಭಿವೃದ್ಧಿ ಕಂಡು ಮಾತನಾಡುವುದು ಸರಿಯಲ್ಲ, ದಾಖಲೆಗಳಿದ್ದರೆ ಬಹಿರಂಗವಾಗಿ ಚರ್ಚಿಸಲು ಸಿದ್ಧ ಎಂದು ತಿಳಿಸಿದರು.
ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಬಹುತೇಕ ಹಗರಣಗಳು ಅವರಿಗೆ ಕಾಣುತ್ತಿಲ್ಲ, ಶಾಸಕರ ಮೇಲಿನ ಆರೋಪ ಅಭಿವೃದ್ದಿಗೆ ಕುಂಠಿತವಾಗುತ್ತದೆ. ಸರ್ಕಾರದಿಂದ ತನಿಖೆ ಮಾಡಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಹೆಚ್.ವೀರೇಶ್, ರಮೇಶ್ ಗಡಾದ್, ಭುವನೇಶ್ ಮೇಟಿ, ಮಾಜಿ ತಾ.ಪಂ.ಸದಸ್ಯ ಗಂಟಿ ಕುಮಾರಸ್ವಾಮಿ, ಶಾಸಕರ ಅಪ್ತ ಸಹಾಯಕರಾದ ಹಿರೇಮಠ, ಜಿ.ಎಸ್. ಸೋಮಪ್ಪ ಸೇರಿದಂತೆ ಇತರರು ಹಾಜರಿದ್ದರು.

Related