ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ: ಸಚಿವ ಬಿ.ನಾಗೇಂದ್ರ

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ: ಸಚಿವ ಬಿ.ನಾಗೇಂದ್ರ

ಬಳ್ಳಾರಿ: ನ.30 ರಂದು ತೆಲಂಗಾಣದಲ್ಲಿ ಚುನಾವಣೆ ನಡೆದಿದ್ದು ನಾಳೆ ಡಿಸೆಂಬರ್ 3ರಂದು ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು ತೆಲಂಗಾಣದಲ್ಲಿ ಬಿಜೆಪಿ ಹಾಗೂ ಬಿ ಆರ್ ಎಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಭಯ ಎಂದು ಸಚಿವ ಬಿ ನಾಗೇಂದ್ರ ಅವರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಬಿಜೆಪಿ ಹಾಗೂ ಬಿಆರ್ ಎಸ್ ಪಕ್ಷದಿಂದ ಕಾಂಗ್ರೆಸ್ ಗೆ ಭಯ ಇದೆ. ಹೀಗಾಗಿ ನಾಮ್ಮೆಲ್ಲರನ್ನ ಇಂದು ಸಂಜೆ ಒಳಗೆ ತೆಲಂಗಾಣಕ್ಕೆ ಹೊಗಲು ಎಐಸಿಸಿ ಸೂಚಿಸಿದೆ.

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿವೆ. ತೆಲಂಗಾಣ ಚುನಾವಣೆಯಲ್ಲಿ ಭಾಗಿಯಾದ ಎಲ್ಲ ಶಾಸಕರಿಗೆ ತುರ್ತು ಕರೆ ಬಂದಿದ್ದುಇಂದು ಸಂಜೆ ಒಳಗೆ ತೆಲಂಗಾಣ ತಲುಪುವಂತೆ ಎ ಐ ಸಿ ಸಿ ಸೂಚನೆ ನೀಡಿದೆ.

ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆ ಇದೆ, ಆದರೆ ಬಿಜೆಪಿ ದೇಶದಲ್ಲಿ ಒಂದು ಕೆಟ್ಟ ಸಂಪ್ರದಾಯದಕ್ಕೆ ನಾಂದಿ ಹಾಡಿದೆ. ನಮ್ಮ ಶಾಸಕರಿಗೆ ಬಿಜೆಪಿ ಮತ್ತು ಬಿ ಆರ್ ಎಸ್ ಪಕ್ಷದವರು ಸೇರಿ ಏನಾದರೂ ಮಾಡುತ್ತಾರೆ ಎನ್ನುವ ಭಯ ಇದೆ. ನಮ್ಮ ಶಾಸಕರಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ, ಹೀಗಾಗಿ ನಮ್ಮ ಶಾಸಕರ ರಕ್ಷಣೆಗೆ ನಾವು ಹೋಗುತ್ತಿದ್ದೆವೆ ಎಂದರು.

ಬಿಜೆಪಿ ಗೆದ್ದವರಿಗೆ ಗಾಳ ಹಾಕುವ ಪ್ಲ್ಯಾನ್ ಮಾಡಿದೆ, ಅದಕ್ಕೆ ನಮ್ಮ ರಾಜ್ಯದ ಉದಾಹರಣೆ. ರಾಜ್ಯದಲ್ಲಿ ನಮ್ಮ ಶಾಸಕರನ್ನು ಕರೆದುಕೊಂಡು, ಹಿಂಬದಿಯಿಂದ ಸರ್ಕಾರ ರಚನೆ ಮಾಡಿದ್ದರು. ಹೀಗಾಗಿ ತೆಲಂಗಾಣದಲ್ಲಿ ಮತ್ತೆ ಆಪರೇಷನ್, ಮಾಡುವ ಸಾಧ್ಯತೆ ಇದೆ. ತೆಲಂಗಾಣದಲ್ಲಿ ನಾವು ಆಪರೇಷನ್ ಮಾಡಲ್ಲ, ನಮ್ಮ ತತ್ವ ಸಿದ್ದಾಂತ ನಂಬಿ ಬೇರೆ ಪಕ್ಷದವರು ಬಂದರೆ ಬರಲಿ ಎಂದರು.

 

Related