ಫ್ರೀ ಹಿಟ್ ಮೇಲೆ ಸಿಕ್ಸರ್ ಹೊಡಿತೀನಿ ತೇಜಸ್ವಿ ಸೂರ್ಯ

ಫ್ರೀ ಹಿಟ್ ಮೇಲೆ ಸಿಕ್ಸರ್ ಹೊಡಿತೀನಿ ತೇಜಸ್ವಿ ಸೂರ್ಯ

ಬೆಂಗಳೂರು: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿದರು. ಅದೇ ರೀತಿ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಕೂಡ ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಬೇಕೆಂದು ತೇಜಸ್ವಿ ಸೂರ್ಯ ಅವರು ಹೇಳಿದರು.

ಇಂದು ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಮೂರು ಲಕ್ಷ ಅಂತರದಲ್ಲಿ ನನ್ನನ್ನು, ನನ್ನ ಕ್ಷೇತ್ರದ ಜನತೆ ಮತ ನೀಡಿದರು. ಐದು ವರ್ಷ ನಾನು ಪ್ರಾಮಾಣಿಕತೆಯಿಂದ ಕಾಯ, ವಾಚ, ಮನಸ ಪೂರ್ವಕವಾಗಿ ಕೆಲಸ ಮಾಡಿದ್ದೇನೆ.

ಮೋದಿಯವರ ಮೇಲಿನ ಪ್ರೀತಿ, ದೇಶಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕ ಬರಬೇಕೆಂಬ ಹಂಬಲದಿಂದ ನನ್ನಂತ ಒಬ್ಬ ಯುವಕನ ಮೇಲೆ ಪ್ರೀತಿ, ಈ ಬಾರಿ 5 ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಬೇಕೆಂದು ನಮ್ಮ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ನಾಮಪತ್ರ ಸಲ್ಲಿಸಲು ಇಂದು ಕೊನೆಯದಿನವಾದ್ದರಿಂದ ಬೃಹತ್​ ಮೆರವಣಿಗೆ ಮೂಲಕ ಜಯನಗರದ BBMP ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ತೇಜಸ್ವಿ ಸೂರ್ಯಗೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಸಾಥ್ ನೀಡಿದರು.

Related