ಅಪ್ಪನಿಗೆ ಸುಪಾರಿ ಮೊಟ್ಟ ಮಗ

ಅಪ್ಪನಿಗೆ ಸುಪಾರಿ ಮೊಟ್ಟ ಮಗ

ಬೆಂಗಳೂರು : ನೂರು ಕೋಟಿ ರೂ. ಆಸ್ತಿ ಒಡೆಯನ ಕೊಲೆಗೆ ಇವರ ಮಗನೇ ಸುಪಾರಿ ಕೊಟ್ಟಿದ್ದು, ಈ ಕೃತ್ಯಕ್ಕೆ ಚಿಕ್ಕಪ್ಪನೇ ಸಾಥ್ ನೀಡಿದ್ದಾನೆ. ತಂದೆಯನ್ನು ಮುಗಿಸಲು 3 ಬಾರಿ ಹಾಕಿದ್ದ ಸ್ಕೆಚ್ ಮಿಸ್ ಆಗಿ, ನಾಲ್ಕನೇ ಬಾರಿ ಕತ್ತುಸೀಳಿ ಕೊಂದಿದ್ದಾರೆ.

ಫೆಬ್ರವರಿ 14ರಂದು ತಲಘಟ್ಟಪುರ ಠಾಣಾ ವ್ಯಾಪ್ತಿಯ ಗುಬ್ಬಲಾಳ ಬಳಿ ಗಣಿ ಉದ್ಯಮಿ ಮಾಧವ ಬರ್ಬರವಾಗಿ ಹತ್ಯೆಯಾಗಿದ್ದರು. ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಅಚ್ಚರಿ ಕಾದಿತ್ತು. ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

ಗಣಿ ಉದ್ಯಮಿಯನ್ನು ಸುಪಾರಿ ಕೊಟ್ಟು ಕೊಲ್ಲಿಸಿದ್ದು ಅವರ ಮಗ ಹರಿಕೃಷ್ಣ. ಆಸ್ತಿಗಾಗಿ ಜನ್ಮ ನೀಡಿದ ತಂದೆಗೆ ಮುಹೂರ್ತ ಇಟ್ಟ ಹರಿಕೃಷ್ಣ ಜತೆ ಚಿಕ್ಕಪ್ಪ ಶಿವರಾಂ ಪ್ರಸಾದ್(ಮಾಧವನ ತಮ್ಮ) ಕೈಜೋಡಿಸಿದ್ದ.

ಹರಿಕೃಷ್ಣ ತನ್ನ ಅಪ್ಪನನ್ನೇ ಕೊಲ್ಲಲು ನಿರ್ಧಾರ ಮಾಡಿದ್ದು ಆಸ್ತಿಗಾಗಿ. ಜಮೀನು ಮಾರಾಟ ಮಾಡುವಂತೆ ತಂದೆಗೆ ಬೆದರಿಕೆಯನ್ನೂ ಹಾಕಿಸಿದ್ದ. ಇದ್ಯಾವುದೂ ಕೈಗೂಡದಿದ್ದಾಗ ಮಾಧವನ ಮುಗಿಸಲು ಮಗ ಮತ್ತು ಸಹೋದರನೇ ಮುಹೂರ್ತ ಫಿಕ್ಸ್ ಮಾಡಿದ್ದರು. 3 ಬಾರಿ ಸುಪಾರಿ ಮೂಲಕ ಕೊಲೆಯತ್ನ ನಡೆಸಿದ್ರು. ನಾಲ್ಕನೇ ಬಾರಿ ಕೊಂದೇ ಬಿಟ್ಟಿರು. ಅದೂ ಕತ್ತುಸೀಳಿ..!

Related