ಸಿದ್ದರಾಮಯ್ಯರನ್ನು ಸೋಲಿಸಲು ಸುಫಾರಿ – ಕೆ.ಸುಧಾಕರ್.

ಸಿದ್ದರಾಮಯ್ಯರನ್ನು ಸೋಲಿಸಲು ಸುಫಾರಿ – ಕೆ.ಸುಧಾಕರ್.

ಸಿದ್ದರಾಮಯ್ಯ ಅವರ ವರ್ಚಸ್ಸು ಹಾಳು ಮಾಡಲು ಆ ಪ್ರಯತ್ನ ನಡೆಯುತ್ತಿದೆ. ಕೋಲಾರದಲ್ಲಿ 5 ಸಾವಿರ ಜನ ಸೇರಿಸಿ ಸಭೆ ಮಾಡಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರು ನಾನು ಅವರನ್ನು ಎದುರಿಸುವೆ.

ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸುವ ವೇಳೆ ದೊಡ್ಡಬಳ್ಳಾಪುರದಲ್ಲಿ ಸಾಧನಾ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲೆಯಿಂದ ಜನರು ಕರೆತರುವ ಬಗ್ಗೆ ಜಿಲ್ಲೆಯಲ್ಲಿಂದು ಸಾಧನಾ ಸಮಾವೇಶದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಕೆಜಿಎಫ್ (KGF) ತಾಲೂಕಿನ ಬೇತಮಂಗಲ ಗ್ರಾಮದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಗೊಂದಲದ ಗೂಡಾಗಿತ್ತು. ಸಚಿವರಾದ ಡಾ ಕೆ ಸುಧಾಕರ್, ಮುನಿರತ್ನ ಎದುರೇ ಕೆಜಿಎಫ್ ಬಿಜೆಪಿ ಗುಂಪುಗಾರಿಕೆ ಸ್ಪೋಟವಾಗಿದ್ದು, ಸಂಪಂಗಿ ಕೆಜಿಎಫ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಉಸ್ತುವಾರಿ ಸಚಿವರು ಘೋಷಿಸಿದ್ದಕ್ಕೆ, ಕೆಜಿಎಫ್ ನಗರ ಘಟಕದ ಬಿಜೆಪಿ ಅಧ್ಯಕ್ಷ ಕಮಲನಾಥನ್ ಮಾತನಾಡುವ ವೇಳೆ, ಸೀಟ್ ಘೋಷಣೆ ಮಾಡಿರುವ ಕ್ರಮ ಸರಿಯಿಲ್ಲ. ಇದು ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಬೇಕಿದೆ ಎಂದರು. ಇದಕ್ಕೆ ವೇದಿಕೆಯಲ್ಲೇ ಗರಂ ಆದ ಸಚಿವ ಮುನಿರತ್ನ, ಬಿಜೆಪಿ ಭಿನ್ನಮತವನ್ನ ನಮ್ಮ ಬಳಿ ಹೇಳು. ಅದು ಬಿಟ್ಟು ವೇದಿಕೆ ಮೇಲೆ ಹೇಳೋದ್ಯಾಕೆ? ಹೋಗಿ ಕುಳಿತುಕೋ ಎಂದು ಗರಂ ಆದರು.

ಕೆಜಿಎಫ್, ಬಂಗಾರಪೇಟೆ ಸಭೆ ನಂತರ ಮಾಜಿ ಶಾಸಕ ವರ್ತೂರು ಪ್ರಕಾಶ್ ನಿವಾಸ ಕೋಗಿಲಹಳ್ಳಿ ಬಳಿ ಸಾಧನಾ ಸಮಾವೇಶ ಸಭೆ ಹಮ್ಮಿಕೊಳ್ಳಲಾಗಿತ್ತು, ಸಭೆಯಲ್ಲಿ ಸಚಿವರಾದ ಡಾ ಕೆ ಸುಧಾಕರ್, ಉಸ್ತುವಾರಿ ಮುನಿರತ್ನ , ಎಂಎಲ್.ಸಿ ಗಳಾದ ಕೇಶವ್ ಪ್ರಸಾದ್, ನಾರಾಯಣಸ್ವಾಮಿ, ವೈ ಸಂಪಂಗಿ ಭಾಗಿಯಾಗಿದ್ದರು.

Related