ಬೆಂಗಳೂರು: ಜ್ಯೋತಿಷಿ ಪ್ರಮೋದ್ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪಿಎ ಮೇಘನಾ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಬೆಂಗಳೂರಿನ ಕೆಂಗೇರಿ ಪೊಲೀಸರು ತಮಿಳುನಾಡಿನ ಸೇಲಂನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಮೇಘನಾ ಅವರು ಜ್ಯೋತಿಷಿ ಬಳಿ ಪಿಎ ಆಗಿ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಜ್ಯೋತಿಷಿ ಬಳಿ ಸಾಕಷ್ಟು ಚಿನ್ನಾಭರಣ, ಹಣ ಇರೋದನ್ನು ನೋಡಿದ್ದಾಳೆ. ನಂತರ ತಮಿಳುನಾಡು ಮೂಲದ ಓರ್ವ ವ್ಯಕ್ತಿಗೆ ದರೋಡೆಗೆ ಸುಪಾರಿ ನೀಡಿದ್ದಾಳೆ. ಅದರಂತೆ ಕಳೆದ ವಾರ ಜ್ಯೋತಿಷಿ ಮನೆಗೆ ತಂಡ ನುಗ್ಗಿದೆ.
ದರೋಡೆ ವೇಳೆ ಮೇಘನಾ ಮತ್ತು ಜ್ಯೊತೀಷಿ ಪ್ರಮೋದ್ ಕೈಕಾಲು ಕಟ್ಟಿ ಹಲ್ಲೆ ಮಾಡಿ ಚಿನ್ನಾಭರಣ ದೋಚಿದ್ರು. ಈ ಸಂಬಂಧ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.