ಸಿಂದಗಿ : ಶ್ರೀ ಪದ್ಮರಾಜ ವೈದಿಕ ಸಂಸ್ಕೃತ ಜೋತಿಷ್ಯ ಪಾಠಶಾಲೆ ಸಾರಂಗಮಠ ವತಿಯಿಂದ ಸಿಂದಗಿಯಲ್ಲಿ ಕಳೆದ 30 ದಿನಗಳಿಂದ ಮಂತ್ರಗಳ ಕಂಠಪಾಠ ಪೂಜಾ ಪದ್ದತಿ ರುದ್ರಾಭಿಷೇಕ, ಹೋಮ, ಹವನ, ನವಗ್ರಹ, ಇತ್ಯಾದಿ ಮಂತ್ರಗಳನ್ನು ವೇ, ಮೂ, ನಿಂಗಯ್ಯ ಶಾಸ್ತ್ರೀಗಳ ಮಾರ್ಗದರ್ಶನದಲ್ಲಿ ಊಟ, ವಸತಿ, ಎಲ್ಲವೂ ಉಚಿತವಾಗಿ ಇರುವುದು.
ಬೀದರ್, ಕೊಣ್ಣೂರು, ತಾರಾಪುರ, ಹಂದಿಗನೂರ, ತಾಳಿಕೋಟಿ, ಯಡ್ರಾಮಿ, ಶಹಾಪುರ, ಕೊಗಟನೂರ ನಾಗವಾಡ ಯಂಕಂಚಿ ನೀರ ಬೂದ್ಯಾಳ, ಸುರಗಳ್ಳಿ, ಸುಲೇಪೇಟ ಚಿಕ್ಕ ಸಿಂದಗಿ, ಉಪ್ಪಲದಿನ್ನಿ, ಗುಲ್ಬರ್ಗ, ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳು ಬಂದು ಕಲಿಯುತ್ತಿರುವರು.
ಈಗಾಗಲೇ ಕೆಲವು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಸಂಸ್ಕಾರಯುಕ್ತರಾಗಿ ಹೋಗಿರುವರು. ಅದಲ್ಲದೇ ಸ್ಥಳೀಯವಾಗಿ ಮಹಿಳೆಯರೂ ಕೂಡ ಶ್ರೀ ರುದ್ರ ಪಠಣ ಮಾಡುವುದು ಕಲಿತು ನಿತ್ಯ ಅವರೂ ಕೂಡ ಪಠಣ ಮಾಡುತ್ತಿರುವರು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವಂತೆ ವೇ ಮೂ ಶ್ರೀ ನಿಂಗಯ್ಯ ಶಾಸ್ತ್ರೀಗಳು ವಯಸ್ಸು ಚಿಕ್ಕದಾದರೂ ವಿನಯವಂತರಾಗಿ ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಕಲಿಸುತ್ತಿದ್ದಾರೆ.