ಕರೋನ ವಿರುದ್ಧ ಸಮರಕ್ಕೆ ಸೌಮ್ಯ ರೆಡ್ಡಿ ಕರೆ

ಕರೋನ ವಿರುದ್ಧ ಸಮರಕ್ಕೆ ಸೌಮ್ಯ ರೆಡ್ಡಿ ಕರೆ

ಬೆಂಗಳೂರು, ಮಾ. 28: ಕೊರೋನ ವೈರಸ್‌ನ ಕುರಿತಾಗಿ ಯಾವುದೇ ರಿತಿಯ ಊಹಾಪೋಹ, ಗಾಳಿ ಮಾತುಗಳಿಗೆ ಕಿವಿಗೊಡದೆ ಲಾಕ್‌ಡೌನ್‌ಗೆ ಸಹಕರಿಸುವ ಮೂಲಕ ಮನೆಯಲ್ಲೇ ಇದ್ದು, ನಾವೆಲ್ಲರೂ ಕೊರೋನ ವಿರುದ್ಧ ಸಮರ ಸಾರೋಣ, ಎಂದು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಕ್ಷೇತ್ರದ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಯನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಯನಗರ ಸೇರಿದಂತೆ ವಿವಿದ ಬಡಾವಣೆಗಳಿಗೆ ಭೇಟಿ ನೀಡಿ ಖದ್ದಾಗಿ ಸ್ವಚ್ಚತೆ ವೀಕ್ಷಣೆ ಮಾಡಿದ ಶಾಸಕಿ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ತಿಳಿಸಿದರು. ಇದೇ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಶಾಸಕಿ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಸಾರ್ವಜನಿಕರು ಅತಿ ಮುಖ್ಯವಾಗಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ‍್ಳುವಂತೆ ಮನವಿ ಮಾಡಿದರು.

ಫಾಗಿಂಗ್, ಸ್ಪ್ರೇ ಮಾಡುವ ಮೂಲಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿದ ಅವರು ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಿದರು. ಜಾಗೃತಿ ಮೂಡಿಸುವ ಮೂಲಕ ಸಾರ್ವಜನಿಕರು ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತ ಸ್ವಚ್ಛವಾಗಿರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

Related