ಸಮಸ್ಯೆಗಳನ್ನು ಬಗೆಹರಿಸುವಂತೆ : ಸಚಿವರಿಗೆ ಮನವಿ

ಸಮಸ್ಯೆಗಳನ್ನು ಬಗೆಹರಿಸುವಂತೆ  : ಸಚಿವರಿಗೆ ಮನವಿ

ಔರಾದ: ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಮಾನ್ಯ ಪಶು ಸಂಗೋಪನಾ ಹಾಗೂ ಬೀದರ ಉಸ್ತುವಾರಿ ಸಚಿವರಾದ ಸನ್ಮಾನ್ಯ ಪ್ರಭು ಬಿ ಚೌವ್ಹಾಣ ಬೆಂಗಳೂರಿನ ಜಯಮಹಲದಲ್ಲಿ ಅವರ ಆರೋಗ್ಯ ವಿಚಾರಿಸಿ ಮತ್ತು ಔರಾದ ಪಟ್ಟಣದಲ್ಲಿ ಇರುವ ಸಮಸ್ಯೆಗಳನ್ನು ಒಂದೊಂದಾಗಿ ವಿವರಿಸುತ್ತ ಗುರುವಾರ ಮನವಿ ಪತ್ರ ನೀಡಲಾಯಿತು.

ಕಾರಂಜಾ ಜಲಾಶಯದಿಂದ ನೇರವಾಗಿ ಔರಾದ ಪಟ್ಟಣಕ್ಕೆ ನೀರು ಹರಿಸುವುದು, ಮುಖ್ಯ ರಸ್ತೆಗೆ ಎರಡು ಕಡೆ ಒಳಚರಂಡಿ ಮಾಡುವುದು, ಪಟ್ಟಣ ಪಂಚಾಯಿತಿ ಪುರಸಭೆಗೆ ಸೇರಿಸುವುದು, ಕನ್ನಡಾಂಬೆ ವೃತ್ತದಿಂದ ಮಿನಿವಿಧಾನಸೌಧದ ವರೆಗೆ ವಿಶೇಷ ಕಂಬಗಳು ಅಳವಡಿಸುವುದು, ಔರಾದ ಕೆರೆಯನ್ನು ಜಿರ್ಣೋ ಮಾಡುವುದು ಉನ್ಬತ ಸ್ಥಿತಿಗೆ ತರುವುದು, ಆಸ್ಪತ್ರೆಯಿಂದ ವಿಧಾನ ಸೌಧದವರೆಗೆ ಮುಖ್ಯ ರಸ್ತೆ ನಿರ್ಮಾಣ ಮಾಡುವುದು, ಪಟ್ಟಣದ 20 ವಾರ್ಡ್‍ಗಳಲ್ಲಿ ವಿವಿಧ ಕಾಮಗಾರಿ ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿಗಳಿಗೆ 50 ಕೋ ರೂ. ಅನುದಾನ ಮಂಜುರು ಮಾಡಲು ಮನವಿ, ಸೂರು ಇಲ್ಲದವರಿಗೆ 1000 ವಸತಿ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರು, ಉಪಾಧ್ಯಕ್ಷರು, ಮುಖಂಡ ಕೇರಬಾ ಪವಾರ, ಯಾದು ಮೇತ್ರೆ, ಬಾಬು ರಾಠೋಡ, ಸಂತೋಷ ಖಾನಾಪೂರೆ, ಅಶೋಕ ಕೋಳಿ, ಇದ್ದರು.

Related