ಸ್ನೇಕ್ ವಿಶ್ವನಾಥನಿಗೆ ನಾಗರ ಹಾವು ಬುಸ್

  • In State
  • October 21, 2020
  • 438 Views
ಸ್ನೇಕ್ ವಿಶ್ವನಾಥನಿಗೆ ನಾಗರ ಹಾವು ಬುಸ್

ಕಚ್ಚಿಸಿಕೊಂಡಿದ್ದ ಹಾವನ್ನೇ ಡಬ್ಬದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಆ ವ್ಯಕ್ತಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದ…ಅಲ್ಲಿಯೇ ನಿಂತಿದ್ದ ಜನರು ಅವನನ್ನು ನೋಡಿ ಮಾರುದ್ದ ದೂರ ಓಡಿದರೇ ಇನ್ನೂ ಕೆಲವರು ಹೌದಪ್ಪ ಧೈರ್ಯ ಅಂದ್ರೆ ಇದು ಅನ್ಕೊಂಡ್ರು…
ಹೌದು, ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆಗೆ ದಾಖಲಾಗಿದ್ದ ಬರ‍್ಯಾರು ಅಲ್ಲ ಸ್ನೇಕ ವಿಶ್ವನಾಥ. ಮನೆ, ಅಂಗಡಿ, ಮುಂಗಟ್ಟು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಏಕಾಏಕಿ ಪ್ರತ್ಯಕ್ಷವಾಗುವ ಸರ್ಪಗಳನ್ನು ಸುರಕ್ಷಿತವಾಗಿ ಹಿಡಿದು ಶ್ರೀಸಾಮಾನ್ಯರ ಆತಂಕ ದೂರ ಮಾಡುತ್ತಿದ್ದ ಸ್ವೇಕ ವಿಶ್ವನಾಥಗೆ, ಜಗದೀಶ ನಗರದಲ್ಲಿರುವ ತಮ್ಮ ಮನೆಯ ಪಕ್ಕದ ಮನೆಯಲ್ಲೇ ಬಂದಿದ್ದ ನಾಗರ ಹಾವನ್ನು ಹಿಡಿಯಲು ಮುಂದಾದಾಗ ಅದು ಕಚ್ಚಿದೆ. ತಕ್ಷಣ ಹಾವನ್ನು ಡಬ್ಬಿಯಲ್ಲಿ ಹಾಕಿಕೊಂಡು ಚಿಕಿತ್ಸೆಗೆ ಕಿಮ್ಸ್ಗೆ ತೆರಳಿದ್ದಾರೆ.
ಈಗಾಗಲೇ ನೂರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಖ್ಯಾತಿ ವಿಶ್ವನಾಥರಿಗೆ ಇದೆ.

Related