ಅತ್ಯಾಚಾರ ಪೇದೆ ವಿರುದ್ಧ ಮೌನ ಪ್ರತಿಭಟನೆ

ಅತ್ಯಾಚಾರ ಪೇದೆ ವಿರುದ್ಧ ಮೌನ ಪ್ರತಿಭಟನೆ

ಕೋಲಾರ : ಪತಿಯ ಕಿರುಕುಳದ ಸಂಬಂಧ ದೂರು ನೀಡಲು ಹೋದ ತಮಗೆ ಸಹಾಯ ಮಾಡುವುದಾಗಿ ನಂಬಿಸಿ ಮನೆಗೆ ಬಂದ ಪೇದೆಯೊಬ್ಬರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಡಿ. ಪಾರ್ವತಿ ಕೋಂ.ಗೋಪಾಲ ಎಂಬುವವರು ನಗರದ ಗಾಂಧಿವನದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.

ನನ್ನ ಪತಿಯ ಕಿರುಕುಳ ತಾಳಲಾರದೇ ದೂರು ನೀಡಲು ಹೋಗಿದ್ದ ಸಂದರ್ಭದಲ್ಲಿ ಶ್ರೀನಿವಾಸಪುರ ಠಾಣೆ ಪೇದೆ ರವೀಂದ್ರ ಎಂಬುವವರು ದೂರು ಪಡೆದು ಸಹಾಯ ಮಾಡುವ ಭರವಸೆ ನೀಡಿದ್ದರು. ನಂತರ ಮನೆಗೆ ಬಂದು ಬಲವಂತವಾಗಿ ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ಶ್ರೀನಿವಾಸಪುರ ಠಾಣೆ, ಮುಳಬಾಗಿಲು ಡಿವೈಎಸ್ಪಿ ಅವರಿಗೂ ದೂರು ನೀಡಿದ್ದು, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

 

 

Related