ಅನಾಥ ಶವಕ್ಕೆ ಹೆಗಲು ಕೊಟ್ಟ ಎಸ್‌ಐ

ಅನಾಥ ಶವಕ್ಕೆ ಹೆಗಲು ಕೊಟ್ಟ ಎಸ್‌ಐ

ಅಮರಾವತಿ : ಹೊಲವೊಂದರಲ್ಲಿ ಅನಾಥ ವ್ಯಕ್ತಿಯ ಶವ ಕಂಡುಬಂದಿದೆ. ಆದರೆ ಆ ಶವ ಎತ್ತುಕೊಂಡು ಹೋಗಲು ಗ್ರಾಮದಲ್ಲಿ ಯಾರೂ ಮುಂದೆ ಬರದಿದ್ದಾಗ ಮಹಿಳಾ ಎಸ್‌ಐ ತಾವೇ ಶವ ಹೊತ್ತುಕೊಂಡು ಬಂದ ದೃಶ್ಯ ಸಂಪಂಗಿಪುರಂನ ಅಡವಿ ಕುಟ್ಟೂರಿನ ಹೊಲವೊಂದರಲ್ಲಿ ಕಂಡುಬಂದಿದೆ.

ಗ್ರಾಮಸ್ಥರಿಗೆ ಸಹಾಯಕ್ಕೆ ಮನವಿ ಮಾಡಿದ ಎಸ್‌ಐ ಕಾಸಿಬುಗ್ಗ ಪೊಲೀಸರಿಗೆ ಅನಾಥ ವ್ಯಕ್ತಿಯೊಬ್ಬ ಸಂಪಂಗಿಪುರಂನ ಅಡವಿ ಕುಟ್ಟೂರಿನ ಹೊಲವೊಂದರಲ್ಲಿ ಸತ್ತುಬಿದ್ದಿರುವುದಾಗಿ ಮಾಹಿತಿ ಬಂದಿದೆ.

ಕಾನ್‌ಸ್ಟೆಬಲ್‌ಗಳ ಜೊತೆ ಕೊಟ್ಟೂರು ಎಸ್‌ಐ ಸಿರಿಶಾ ಸ್ಥಳಕ್ಕೆ ತೆರಳಿದ್ದಾರೆ. ಹೊಲದ ಮಧ್ಯೆ ಶವ ಬಿದ್ದಿದ್ದು, ಅಲ್ಲಿಗೆ ವಾಹನ ತೆರಳಲು ಸಾಧ್ಯವಿಲ್ಲದ ಕಾರಣ ಗ್ರಾಮಸ್ಥರಿಗೆ ಶವ ಕೊಂಡೊಯ್ಯಲು ಸಹಾಯ ಮಾಡುವಂತೆ ಕೇಳಿಕೊಂಡರು.

ಅನಾಥ ಆತನ ಶವವನ್ನು ವಾಹನದವರೆಗೆ ಹೊತ್ತುಕೊಂಡು ಹೋಗಲೂ ನಿರಾಕರಿಸಿದ್ದಾರೆ. ಆಗ ತಾವೇ ಶವ ಹೊರುವ ನಿರ್ಧಾರಕ್ಕೆ ಬಂದಿದ್ದಾರೆ ಎಸ್‌ಐ. ಲಲಿತಾ ಚಾರಿಟಬಲ್ ಟ್ರಸ್ಟ್ ಸದಸ್ಯನ ಸಹಾಯದೊಂದಿಗೆ ಶವವನ್ನು ತಾವೇ ಎತ್ತಿಕೊಂಡು ಹೋಗಲು ಮುಂದಾದರು.

Related